ಉಡುಪಿಯಲ್ಲಿ ಹವ್ಯಕ ವಲಯೋತ್ಸವ

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಂಗಳೂರು ಮoಡಲ ವ್ಯವಸ್ಥೆಯ ಅಧೀನದಲ್ಲಿರುವ ಉಡುಪಿ  ಹವ್ಯಕಸಭಾ ಉಡುಪಿ ಸಂಸ್ಥೆಯ ಸಹಭಾಗಿತ್ವದಲ್ಲಿ ಹವ್ಯಕ ವಲಯೋತ್ಸವ ಉಡಪಿಯ ಪೆರಂಪಳ್ಳಿ ಹವ್ಯಕಧಾಮದಲ್ಲಿ ನೆರವೇರಿತು.
ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠದ ವಿದ್ಯಾಪರಿಷತ್‌ನ ಅಧ್ಯಕ್ಷ ಡಾ:ಎಂ.ಆರ್. ಹೆಗಡೆಯವರು ಮಾತನಾಡಿ, ಇಡಿಯ ರಾಷ್ಟ್ರವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಶ್ರೀ ಸಂಸ್ಥಾನದವರಿ೦ದ ಸ್ಥಾಪಿತ ವಾದ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠವು ಬಹುಜನರ ಪ್ರಶಂಸೆಗೆ ಪಾತ್ರವಾಗಿದ್ದು, ಅವರ ಯೋಜನೆಗಳಿಗೆ ಸರ್ವರ ಸಹಕಾರ ಅಗತ್ಯ ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾ ಪೀಠದ ಕನ್ನಡ ವಿಭಾಗ ಮುಖ್ಯಸ್ಥ ಮತ್ತು ಹವ್ಯಕಸಭಾ, ಉಡುಪಿ ಸಂಸ್ಥೆಯ ಅಧ್ಯಕ್ಷ ಡಾ:ಪಾದೆಕಲ್ಲು ವಿಷ್ಣು ಭಟ್ಟರು ಮಾತನಾಡಿ ಶ್ರೀ ಸಂಸ್ಥಾನದವರ ವ್ಯವಸ್ಥೆಯಲ್ಲಿನ ಉತ್ತಮ ಯೋಜನೆಗಳಲ್ಲಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಮಂಗಳೂರು ಮಂಡಲದ ಉಪಾಧ್ಯಕ್ಷ ಶ್ರೀ ರಾಜಶೇಖರ ಭಟ್ ಕಾಕುಂಜೆಯವರು ಮಾತನಾಡಿ ಹವ್ಯಕರ ಸಂಘಟನೆಯನ್ನು ಬಲಪಡಿಸಲು ಎಲ್ಲ ಪ್ರಧಾನರ, ಗುರಿಕಾರರ, ಕಾರ್ಯಕರ್ತರು ಜವಾಬ್ದಾರಿಯುತವಾಗಿ ಕೆಲಸಮಾಡುವಂತೆ ಕೋರಿದರು.
ವಲಯಾಧ್ಯಕ್ಷ ಶ್ರೀ ಗುಣವಂತೇಶ್ವರ ಭಟ್ಟರು ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿ ಅಲ್ಪ ಸಮಯಾವಕಾಶದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಲಯೋತ್ಸವವನ್ನು ಸಮರ್ಥವಾಗಿ ಆಚರಿಸಿದ ಬಗ್ಗೆ ಎಲ್ಲರನ್ನು ಅಭಿನಂದಿಸಿದರು. ವಲಯದ ಉಪಾಧ್ಯಕ್ಷ ಬಾಲಚಂದ್ರ ಕರಣಿಕ್ ಹಾಗೂ ಸಭಾದ ಆಂತರಿಕ ಲೆಕ್ಕಪರಿಶೋಧಕ ಪ್ರೊ|ಸದಾಶಿವ ರಾವ್ ಉಪಸ್ಥಿತರಿದ್ದರು.
ಮಾಧ್ಯಮ ಪ್ರಧಾನ ಷಣ್ಮುಖರಾಜ್ ಎಂ. ಪ್ರಸ್ತಾವನೆಗೈದರು. ವಲಯ ಕಾರ್ಯದರ್ಶಿ ಎನ್.ರಾಮ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹವ್ಯಕಸಭಾದ ಕಾರ್ಯದರ್ಶಿ ಕೆ.ಎನ್.ಗಿರೀಶ್ ವಂದಿಸಿದರು.
 
 
 
 
 
 
 
 
 
 
 

Leave a Reply