ಮಂಗಳೂರು: ಉಡುಪಿ ಮೂಲದ ವಿದ್ಯಾರ್ಥಿ ಎನ್​ಐಎ ವಶಕ್ಕೆ

ಮಂಗಳೂರು : ಮಂಗಳೂರಿನ ಪಿಎ ಎಂಜಿನಿಯರಿಂಗ್​ ಕಾಲೇಜಿನಲ್ಲಿ ಎನ್​ಐಎ ನಡೆಸಿದ ದಾಳಿಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್​ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ವಿದ್ಯಾರ್ಥಿ ಉಡುಪಿ ಮೂಲದ ರಿಹಾನ್​ ಶೇಖ್​ ಎಂದು ತಿಳಿದು ಬಂದಿದೆ. ಶಿವಮೊಗ್ಗದ ಟ್ರಾಯಲ್​ ಬ್ಲಾಸ್ಟ್​ ಮತ್ತು ಉಗ್ರ ಚಟುವಟಿಕೆ ಪ್ರಕರಣದಲ್ಲಿ ಮಾಝ್​ ಮನೀರ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಸದ್ಯ ಇದೇ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಬಂಧಿತ ಮಾಝ್​ ಮನೀರ್ ಪಿ.ಎ ಕಾಲೇಜಿನಲ್ಲಿ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಮಂಗಳೂರಿನ ಬಲ್ಮಠದಲ್ಲಿ ವಾಸ್ತವ್ಯ ಹೂಡಿದ್ದ ಈತ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಬಂಧಿತ ಮಾಝ್​ ಜೊತೆಯಲ್ಲಿ ಉಡುಪಿ ಮೂಲದ ರಿಹಾನ್​ ಶೇಖ್​ ಕೂಡ ಉಗ್ರ ಚಟುವಟಿಕೆಗಳಲ್ಲಿ ಭಾಗಿ ಯಾಗಿಯೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಎನ್​ಐಎ ಅಧಿಕಾರಿಗಳು ರಿಹಾನ್​ ಶೇಖ್​ನನ್ನು ಇಂದು ವಶಕ್ಕೆ ಪಡೆದಿದ್ದಾರೆ.


ಬೆಂಗಳೂರಿನಿಂದ ಆಗಮಿಸಿರುವ ಏಳು ಮಂದಿ ಅಧಿಕಾರಿಗಳಿರುವ ಎನ್​ಐಎ ತಂಡ ಪಿ.ಎ ಇಂಜಿನಿಯರಿಂಗ್​ ಕಾಲೇಜಿನಲ್ಲಿ ತನಿಖೆ ನಡೆಸುತ್ತಿದೆ. ಮಾಝ್​ ಮುನೀರ್​​ ಜೊತೆಯಲ್ಲಿ ಮಂಗಳೂರಿನ ಕುಕ್ಕರ್​ ಬ್ಲಾಸ್ಟ್​ ರೂವಾರಿ ಶಾರೀಕ್​ ಕೂಡ ಇದ್ದ. ಸದ್ಯ ಶಿವಮೊಗ್ಗದ ಕೇಸ್​ ಸಂಬಂಧ ಪಿ.ಎ ಕಾಲೇಜಿನಲ್ಲಿ ತನಿಖೆ ನಡೆಯುತ್ತಿದೆ.

 
 
 
 
 
 
 
 
 
 
 
 

Leave a Reply