ಉಡುಪಿ: ಲೋನ್ ನೀಡುವುದಾಗಿ ನಂಬಿಸಿ 4 ಲಕ್ಷ ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಗಿರೀಶ್ ಆಚಾರ್ಯ ಇವರು ಹಣದ ಅವಶ್ಯಕತೆಗಾಗಿ ಫೇಸ್ ಬುಕ್ ನಲ್ಲಿ ಕಂಡುಬಂದ ಬಜಾಜ್ ಲೋನ್ ಎಂಬ ಜಾಹೀರಾತಿನಲ್ಲಿ ಲೋನ್ ಪಡೆಯುವ ಬಗ್ಗೆ ದಾಖಲೆಗಳನ್ನು ಆನ್ ಲೈನ್ ಮುಖೇನ ಅಪ್ಲೋಡ್ ಮಾಡಿದ್ದಾರೆ.
ಫೆಬ್ರವರಿ 27 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಬಜಾಜ್ ಫೈನಾನ್ಸ್ ಎಂಬುದಾಗಿ ಹೇಳಿ, ಲೋನ್ ನೀಡುವುದಾಗಿ ನಂಬಿಸಿ, ಲೋನ್ ಬಗ್ಗೆ ಜಾರ್ಜ್ ಎಂದು ಹೇಳಿದ್ದಾನೆ. ಮಾರ್ಚ್ 1 ರಿಂದ 3 ರ ಮಧ್ಯಾವಧಿಯಲ್ಲಿ ಆರೋಪಿಗಳು ಹಂತ ಹಂತವಾಗಿ ಒಟ್ಟು ರೂ. 4,09,167/- ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದಾರೆ. ಲೋನ್ನ್ನು ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.