ತುಳು ಹಾಸ್ಯ ನಟ ಅರವಿಂದ್ ಬೋಳಾರ್ ಅವರಿಗೆ ರಸ್ತೆ ಅಪಘಾತ; ಗಂಭೀರ ಗಾಯ!

ಮಂಗಳೂರಿನ ಸಿನಿ- ನಾಟಕ ಹಾಸ್ಯ ನಟ, ಅರವಿಂದ ಬೋಳಾರ್‌ ಅವರಿಗೆ ರಸ್ತೆ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದಾರೆ.

ತುಳು ಚಿತ್ತರಂಗದ ದೈತ್ಯ ಪ್ರತಿಭೆ, ಮಂಗಳೂರ ಮಾಣಿಕ್ಯ ಖ್ಯಾತಿಯ ಖಾತ್ಯ ಹಾಸ್ಯ ನಟ ಅರವಿಂದ ಬೋಳಾರ್‌ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಕಿಡ್‌ ಆಗಿ ಬಿದ್ದಿದ್ದಾರೆ. ಅಪಘಾತದಲ್ಲಿ ಅವರು ಗಂಭೀರ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ. ಅವರನ್ನೂ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರವಿಂದ್ ಬೋಳಾರ್, ಈ ಹೆಸರು ಕೇಳಿದ ತಕ್ಷಣ ತುಳುನಾಡ ಜನರ ಮೊಗದಲ್ಲಿ ಥಟ್ಟನೆ ಕಿರುನಗೆಯೊಂದು ಹಾದು ಹೋಗುತ್ತೆ. ತನ್ನ ಅದ್ಭುತ ನಟನೆ, ವಿಶಿಷ್ಟ ಮ್ಯಾನರಿಸಂ ಮೂಲಕ ತುಳು ರಂಗಭೂಮಿಯ ಪ್ರತಿಭೆ ಈ ಬೋಳಾರ್ ಚಿತ್ರರಂಗದಲ್ಲಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿದ್ದಾರೆ.

ವೈದ್ಯರು ಗಾಬರಿ ಪಡುವ ಅಗತ್ಯ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕರಾವಳಿಯಲ್ಲಿ ಅರವಿಂದ್ ಬೋಳಾರ್ ಹೆಸರು ಕೇಳಿದ ತಕ್ಷಣ ಇರೋಬರೋ 32 ಹಲ್ಲುಗಳನ್ನು ಸಾರ್ವಜನಿಕರಿಗೆ ಕಾಣುವಂತೆ ನಗುವ ಅಗಲವಾದ ಮುಖವೊಂದು ಥಟ್ಟನೆ ಬಂದು ಮನಸ್ಸಲ್ಲಿ ನಿಲ್ಲುತ್ತದೆ. ದೈನಂದಿನ ಸಮಸ್ಯೆಗಳ ಮಧ್ಯೆ ಗಂಟು ಕಟ್ಟಿಕೊಂಡ ಮುಖ, ಸಿಕ್ಕು ಹಾಕಿಕೊಂಡ ಹುಬ್ಬು, ಗೋಜಲು ಗೊಂಡ ಮನಸ್ಸುಗಳು ಬೋಳಾರ್ ಹೆಸರು ಕೇಳಿದ ಕೂಡಲೇ ತಮ್ಮ ಬಿಗುವು ಸಡಿಲ ಮಾಡಿಕೊಂಡು ನಿರಾಳವಾಗುತ್ತವೆ. ಅದು ತುಳುನಾಡಿನ ಹಾಸ್ಯ ಪ್ರತಿಭೆ ಅರವಿಂದ್ ಬೋಳಾರ್ ಅವರ ಹೆಚ್ಚುಗಾರಿಕೆ. ತನ್ನ ಅದ್ಭುತ ನಟನೆ, ವಿಶಿಷ್ಟ ಮ್ಯಾನರಿಸಂ ಮೂಲಕ ತುಳು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅರವಿಂದ ಬೋಳಾರ್ ಅವರು ಹಾಸ್ಯಪ್ರಿಯ ಕರಾವಳಿಯ ಹಲವು ಟ್ರೊಲ್ ಪೇಜುಗಳ ಪ್ರಮುಖ ಕಚ್ಚಾ ವಸ್ತು. ಈ ಪ್ರತಿಭೆಯ ಕೇವಲ ಮುಖವನ್ನು ಇಟ್ಟುಕೊಂಡು ಹಲವು ಸೋಶಿಯಲ್ ಮೀಡಿಯಾಗಳು ಇಂದು ಬದುಕುತ್ತಿವೆ. ಅಷ್ಟರ ಮಟ್ಟಿಗೆ ತುಳು ಮಾನಸದಲ್ಲಿ ಅರವಿಂದ್ ಬೋಳಾರ್ ರವರು ದೊಡ್ಡ ಸ್ಥಾನವನ್ನು ಪಡೆದುಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply