ಪ್ರೊ ಎಸ್ ಮಂಜುನಾಥ ಕಲ್ಕೂರ ನಿಧನ

ನಿವೃತ್ತ ಕಾಲೇಜು ಉಪನ್ಯಾಸಕ ಪ್ರೊ ಎಸ್ ಮಂಜುನಾಥ ಕಲ್ಕೂರ ( 94 ವರ್ಷ ) ವಯೋಸಹಜ ಅನಾರೋಗ್ಯದಿಂದ ಎಪ್ರಿಲ್ 16 ಭಾನುವಾರ ಸಂಜೆ ಉಡುಪಿಯ ಸಗ್ರಿ ಚಕ್ರತೀರ್ಥದ ಬಳಿ ಇರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು .

ಮೂಡಬಿದರೆ ಮಹಾವೀರ ಕಾಲೇಜು ಉಡುಪಿಯ ಎಂ ಜಿ ಎಂ ಕಾಲೇಜುಗಳಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು . ರಾಷ್ಟ್ರೀಯ ವಿಚಾರಧಾರೆಗಳಲ್ಲಿ ಪ್ರಖರ ನಿಷ್ಠೆಯನ್ನು ಹೊಂದಿದ್ದ ಕಲ್ಕೂರರು ಉಡುಪಿಯ ಅಷ್ಟಮಠಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು .
ಮೃತರು ಪತ್ನಿ , ಸಾಮಾಜಿಕ ಧುರೀಣ ಎಸ್ ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಮೂವರು ಪುತ್ರರು ಓರ್ವ ಪುತ್ರಿ ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ ‌
ಸಂತಾಪ : ಮಂಜುನಾಥ ಕಲ್ಕೂರರ ನಿಧನಕ್ಕೆ ಪರ್ಯಾಯ ಶ್ರೀ ಕೃಷ್ಣಾಪುರ ಪಲಿಮಾರು ಪುತ್ತಿಗೆ ಪೇಜಾವರ ಕಾಣಿಯೂರು ಸೋದೆ ಅದಮಾರು ಶೀರೂರು ಶ್ರೀಪಾದರು , ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಅಹಿತ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿ , ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸಿದ್ದಾರೆ .

 
 
 
 
 
 
 
 
 
 
 

Leave a Reply