ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ವಿಶ್ವ ಮರೆಗುಳಿ ದಿನಾಚರಣೆ

ಉಡುಪಿ, ಸೆ.22: ವಿಶ್ವ ಅಲ್ಝೀಮರ್ಸ್ ಡೇ (ಮರೆಗುಳಿ ದಿನ) ಅಂಗವಾಗಿ ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಸಂಯುಕ್ತಾಶ್ರಯದಲ್ಲಿ ಮಾಹಿತಿ ಕಾರ್ಯಾಗಾರ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಿತು.

ಡಾ. ಎ. ವಿ. ಬಾಳಿಗ ಸ್ಮಾರಕ ಚಾರಿಟೀಸ್ ಮತ್ತು ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಟ್ರಸ್ಟಿ ಡಾ. ಆರ್. ವಿ. ಬಾಳಿಗ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾಹಿತಿ ಕಾರ್ಯಾಗಾರ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಪಿ. ವಿ. ಭಂಡಾರಿ, ಡೆಮಿನ್ಶಿಯಾ ಕಾಯಿಲೆ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮಾಹೆ ಫೈಮರ್ ಇನ್ ಸ್ಟಿಟ್ಯೂಟ್ ಪ್ರೊಫೆಸರ್ ಆಂಡ್ ಕ್ಯೂಎಂಆರ್, ಎಂಸಿಓ ಎನ್ ನಿರ್ದೇಶಕಿ ಡಾ. ಎಲ್ಸ ಸನಟೊಂಬಿ ದೇವಿ ಉಪಸ್ಥಿತರಿದ್ದರು.  
ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಡಾ. ಎ. ವಿ. ಬಾಳಿಗ ಆಸ್ಪತ್ರೆಯ ಪೇಶೆಂಟ್ ಕೇರ್ ಎಕ್ಸಿಕ್ಯೂಟಿವ್ ರಂಗನಾಥ ರಾವ್ ಪ್ರಾರ್ಥಿಸಿದರು. ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ನ ಪಿ.ಎಚ್.ಡಿ ಸ್ಕಾಲರ್ ಕ್ಲಾರಿಟಾ ಶೈನಲ್ ಮಾರ್ಟಿಸ್ ವಂದಿಸಿದರು. ಆಪ್ತ ಸಮಾಲೋಚಕಿ ಭಾಗ್ಯಶ್ರೀ ನಿರೂಪಿಸಿದರು.
 
 
 
 
 
 
 
 
 
 
 

Leave a Reply