ಕರ್ನಾಟಕ ಗೃಹಮಂಡಳಿ ನಿವಾಸಿಗಳ ಸಂಘ ದೊಡ್ಡಣಗುಡ್ಡೆ; 35 ನೇ ವರ್ಷದ ವಾರ್ಷಿಕೋತ್ಸವ

ಕರ್ನಾಟಕ ಗೃಹಮಂಡಳಿ ನಿವಾಸಿಗಳ ಸಂಘ ದೊಡ್ಡಣಗುಡ್ಡೆ ಉಡುಪಿ ಇದರ 35 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಕಲ್ಪೋಕ್ತ ಪೂಜೆಯ ರಜತ ಮೊಹೋತ್ಸವ ಆದಿತ್ಯವಾರ ಸಂಜೆ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಠಾರ ದಲ್ಲಿ ಜರಗಿತು. ಸಮಾರಂಭದ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ದೀಪ ಬೆಳಗಿಸಿ ಚಾಲನೆ ನೀಡಿ ಸಂಘಟನೆಯಿಂದ ವ್ಯಕ್ತಿಯ ವಿಕಾಸ ಹಾಗೂ ಸಂಘದ ಐಕ್ಯತೆಗೆ ಸಾಮರಸ್ಯ ಶಕ್ತಿ ಬೆಳೆಯಲು ಪೂರಕವಾಗಿದ್ದು ಎಲ್ಲರೂ ಒಂದಾಗಿ ಧಾರ್ಮಿಕ , ಸಾಮಾಜಿಕ ಚಟುವಟಿಕೆ ನೆಡೆಸುತ್ತಾ ಅಭಿವೃದ್ಧಿ ಯತ್ತಾ ಸಾಗಲಿ ಶುಭ ಹಾರೈಸಿದರು. ಗೃಹಮಂಡಳಿ ನಿವಾಸಿಗಳ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಶೇರಿಗಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಕಳೆದ 25 ವರ್ಷ ಸಂಘದ ಬೆಳವಣಿಗೆಗೆ ವಿಶೇಷ ಸೇವೆ ಸಲ್ಲಿಸಿದ ಸಂಘದ ಗೌರವ ಅಧ್ಯಕ್ಷರಾದ ಕುತ್ಪಾಡಿ ವಿಠಲ್ ಗಾಣಿಗ ದಂಪತಿಗಳನ್ನು ಮಾನ್ಯ ಶಾಸಕರು ಗೌರವಿಸಿದರು. ಮುಖ್ಯ ಅತಿಥಿಯಾಗಿ ಶಿಕ್ಷಣ ಇಲಾಖೆಯ ಅಶೋಕ್ ಕಾಮತ್, ನಗರಸಭೆಯ ಪೌರಾಯುಕ್ತ ರಾಯಪ್ಪ, ಬೆಂಗಳೂರಿನ ಕೆ ಎಮ್ ಉಡುಪ ನೀಲಾವರ, ಸಂಘದ ಕಾರ್ಯದಶಿ ರಾಮ ಭಟ್ ಹಾಗೂ ಪಾಧಿಕಾರಿಗಳು ಉಪಸ್ಥರಿದ್ದರು.

 ಸಾಮೂಹಿಕ ಸತ್ಯನಾರಾಯಣ ಕಲ್ಪೋಕ್ತ ಪೂಜೆಯ ಧಾರ್ಮಿಕ ಪೂಜಾ ವಿವಿಧಾನಗಳನ್ನು ಅರ್ಚಕ ವೃಂದದವರು ನೆಡೆಸಿಕೊಟ್ಟರು, ಸಂಘದ ನಿವಾಸಿಗಳಂದ ಮನೋರಂಜನೆ ಕಾರ್ಯಕ್ರಮ ನೆಡೆಯಿತು.

 
 
 
 
 
 
 
 
 
 
 

Leave a Reply