ಕೊಡವೂರು ಬ್ರಾಹ್ಮಣ ಮಹಾಸಭಾದದಿಂದ ವಿಪ್ರ ಸಮಾಜಕ್ಕೆ ಮಾದರಿ ಕಾರ್ಯಕ್ರಮ 

ಮಲ್ಪೆ:  ಕೊಡವೂರು ಬ್ರಾಹ್ಮಣ ಮಹಾಸಭಾದ ರಜತೋತ್ಸವದ ಅಂಗವಾಗಿ ನಡೆಯುತ್ತಿರುವ “ರಜತಪಥದಲ್ಲಿ ವಿಪ್ರ ಹೆಜ್ಜೆ” ಸರಣಿಯ 4ನೇ ಕಾರ್ಯಕ್ರಮವಾಗಿ  “ಲಾಕ್ ಡೌನ್” ಹಿನ್ನೆಲೆಯಲ್ಲಿ ನಿತ್ಯ ಜೀವನದ ಆಹಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳುವಲ್ಲಿ ಅಸಹಾಯಕರಾದ  ವಲಯದ  50 ಬ್ರಾಹ್ಮಣ ಕುಟುಂಬಗಳಿಗೆ ದಾನಿಗಳ ಸಹಕಾರದೊಂದಿಗೆ ಪ್ರತಿ ಕುಟುಂಬಕ್ಕೆ ತಲಾ 2000/- ರುಪಾಯಿ ಮೌಲ್ಯದ.
ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಎಣ್ಣಿ ಮುಂತಾದ 13 ಬಗೆಯ ದಿನ ನಿತ್ಯ ಉಪಯೋಗಿಸುವ ದವಸ ದಾನ್ಯಗೊಳಗೊಂಡ ಕಿಟ್ ​ಗಳನ್ನು ​ಫಲಾನುಭವಿಗಳ ಮನೆಗಳಿಗೆ ತೆರಳಿ ವಿತರಿಸಲಾಯಿತು.  
ಈ ಸಂದರ್ಭದಲ್ಲಿ ರಜತೋತ್ಸವ ಸಮಿತಿಯ ಕಾರ್ಯಾಧ್ಯಕ್ಷ  ಮಂಜುನಾಥ ಭಟ್, ಪ್ರಧಾನ ಕಾರ್ಯದರ್ಶಿ ​​ಚಂದ್ರಶೇಖರ್ ರಾವ್,  ಉಪಾಧ್ಯಕ್ಷರುಗಳಾದ  ಶ್ರೀಶ ಭಟ್,  ಸುರೇಶ್ ಭಟ್, ಶ್ರೀನಿವಾಸ ಉಪಾಧ್ಯ , ಕಾರ್ಯದರ್ಶಿಗಳಾದ  ಶ್ರೀನಿವಾಸ ಬಾಯರಿ,  ಧಾರ್ಮಿಕ ಕಾರ್ಯದರ್ಶಿ  ಲಕ್ಷ್ಮೀ ನಾರಾಯಣ ಭಟ್, ಪ್ರಚಾರ ಸಮಿತಿಯ ಪ್ರಸನ್ನ ಕೊಡವೂರು ಮುಂತಾದವರು ಉಪಸ್ಥಿತರಿದ್ದರು.​​
 
 
 
 
 
 
 
 
 
 
 

Leave a Reply