ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜಿಲ್ಲೆಯ ವತಿಯಿಂದ ರಕ್ತದಾನ ಶಿಬಿರ

ಮಣಿಪಾಲ: – ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜಿಲ್ಲೆ ಮತ್ತು ಕೆ.ಎಂ.ಸಿ ಮಣಿಪಾಲ ರಕ್ತನಿಧಿ ಕೇಂದ್ರ ಆಶ್ರಯದಲ್ಲಿ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ 75 ಯೂನಿಟ್ ರಕ್ತದಾನ ಶಿಬಿರ ಆ .14ರಂದು ಕೆ.ಎಂ.ಸಿ ಲೆಕ್ಚಲ್ ಹಾಲ್ ನಲ್ಲಿ ನಡೆಯಿತು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಜ೯ರಿ ವಿಭಾಗದ ಪ್ರಾಧ್ಯಾಪಕ ಡಾII ಅಣ್ಣಪ್ಪ ಕುಡ್ವ ,ರಕ್ತಕ್ಕೆ ಪಯಾ೯ಯ ಮತ್ತೊಂದಿಲ್ಲ ಒಂದು ಯುನಿಟ್ ರಕ್ತದಿಂದ 3 ಜನರ ಜೀವ ಉಳಿಸಲು ಸಾಧ್ಯ’ವೈದ್ಯಕೀಯ ಪ್ರತಿನಿಧಿಗಳ ಕಾಯ೯ ಈ ನಿಟ್ಟಿನಲ್ಲಿ ಶ್ಯಾಘನೀಯ ಎಂದರು.

ಅತಿಥಿಗಳಾಗಿ ರಕ್ತನಿಧಿ ವಿಭಾಗದ ಮುಖ್ಯಸ್ತರಾದ ಡಾII ಶಮ್ಮಿಶಾಸ್ರಿ, ಎಂ.ಎಸ್ ಕಚೇರಿಯ ಡಾII ಉತ್ತಮ್ ಶಮಾ೯, ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ್, ಮಧುಸೂಧನ್ ಹೇರೂರು ಉಪಸ್ಥಿತರಿದ್ದರು.

ಈ ಸಂದಭ೯ದಲ್ಲಿ ಹಿರಿಯ ವೈದ್ಯಕೀಯ ಪ್ರತಿನಿಧಿ ಮಧುಸೂಧನ್ ಹೇರೂರು ರವರನ್ನು ಗೌರವಿಸಲಾಯಿತು. ಅನಂತ್ ಹೊಳ್ಳ ಪ್ರಾಥಿ೯ಸಿದರು. ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು.

 
 
 
 
 
 
 
 
 
 
 

Leave a Reply