ಆಸರೆ ಚಾರಿಟೇಬಲ್ ಟ್ರಸ್ಟ್ 91ನೇ ಮನೆಗೆ ಇಂದು ಉಚಿತ ವಿದ್ಯುತ್ ಸಂಪರ್ಕ

ಉಡುಪಿ : ಇಂದು ಸೆ.11 ಸಾಯಂಕಾಲ 4.30ಕ್ಕೆ ಉಡುಪಿ ನಗರದ ಕಸ್ತೂರ್ಬಾ ನಗರ ವಾರ್ಡಿನ ಚಿಟ್ಟಾಡಿ ಯ ದಲಿತ ಸಮುದಾಯದ ನಾರಾಯಣ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ.

ಈ ಮನೆಗೆ ಕಳೆದ20 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇರುವುದಿಲ್ಲ. ಈ ಮನೆಯ ಸಂಪೂರ್ಣ ವಿದ್ಯುತ್ ಸಂಪರ್ಕದ ವೆಚ್ಚವನ್ನು ಉಡುಪಿ ಕಲ್ಸಂಕ ಪಿ. ವಿಶ್ವನಾಥ ಶೆಣೈ ಮತ್ತು ಅನನ್ಯ ಶೆಣೈ ದಂಪತಿಗಳ ಪುತ್ರಿ ಇಂದು ತನ್ನ 5 ನೆ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವ ಜೇಷ್ಠ ಶೆಣೈ ನೀಡಿದ್ದು ಅವರೇ ಉದ್ಘಾಟಿಸಿಲಿದ್ದಾರೆ.

ಮೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಣರಾಜ ಭಟ್, ನಗರಸಭಾ ಸದಸ್ಯರಾದ ಶ್ರೀ ರಾಜು, ಉಪಸ್ಥಿತರಿದ್ದು ಆಸರೆಯ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಪ.ವಸಂತ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply