ಶಿಕ್ಷಕಿ ಬಿಂದು ಅವರಿಗೆ ಮಹಿಳಾ ಚೈತನ್ಯ ರತ್ನ ಪ್ರಶಸ್ತಿ

ಅಜೆಕಾರು: ಬೆಂಗಳೂರಿನ ಹಾವನೂರು ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿರುವ ಅಜೆಕಾರಿನ ಶಿಕ್ಷಕಿ ಬಿಂದು ಕೆ ಅವರು ಸ್ವರ್ಣ ಭೂಮಿ ಪೌಂಡೇಶನ್ ಬೆಂಗಳೂರು ನೀಡುವ ಮಹಿಳಾ ಚೈತನ್ಯ ರತ್ನ ಪ್ರಶಸ್ತಿಯನ್ನು ಮಾರ್ಚ್ 12 ರಂದು ಸ್ವೀಕರಿಸಲಿದ್ದಾರೆ. ಬೆಂಗಳೂರು ನೈರುತ್ಯ ತಾಲೂಕು ಮಟ್ಟದ ಸರಕಾರದ ಉತ್ತಮ ಶಿಕ್ಷಕಿ,ಕಾವ್ಯ ಸಂಭ್ರಮ ಪ್ರಶಸ್ತಿ, ಸಾಧನಾ ರತ್ನ ಪ್ರಶಸ್ತಿ, ಕೆಂಪಮ್ಮ ಪುರಸ್ಕಾರ,ಸೇವಾ ರತ್ನ ರಾಜ್ಯ ಪ್ರಶಸ್ತಿ,ಕನ್ನಡ ರತ್ನ ಪ್ರಶಸ್ತಿ, ಆದಿಗ್ರಾಮೋತ್ಸವ ಯುವ ಸಿರಿ ಗೌರವ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಆದಿಗ್ರಾಮೋತ್ಸವ ಸಮಿತಿ ಮತ್ತು ಅ.ಕ.ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅವರನ್ನು ಅಭಿನಂದಿಸಿದೆ.

 
 
 
 
 
 
 
 
 
 
 

Leave a Reply