ಕರಾವಳಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19 ರಂದು ಸಾರ್ವಜನಿಕರು, ವಿವಿಧ ಸಮಿತಿಗಳು ಗಣೇಶೋತ್ಸ ವವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ಸರಕಾರ ಸೆಪ್ಟೆಂಬರ್ 18 ಕ್ಕೆ ರಜೆಯನ್ನು ನೀಡಿದ್ದು ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದೆ.
ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ ಶಾಲಾ ಕಾಲೇಜು ಸಹಿತ ಸರ್ಕಾರಿ ಕಚೇರಿಗಳಿಗೆ ಸೆಪ್ಟೆಂಬರ್ 19 ರಂದೇ ರಜೆ ನೀಡಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ.