ಜೀವನಪೂರ್ತಿ ಸನ್ನಡತೆಗೆ ಉಪನಯನ ಸಂಸ್ಕಾರ ಸಹಕಾರಿ: ಪೇಜಾವರ ಶ್ರೀಗಳು

ಉಡುಪಿ, ಮೇ 14: ಹಿಂದೂ ಧರ್ಮದಲ್ಲಿ ಉಪನಯನ ಸಂಸ್ಕಾಾರಕ್ಕೆೆ ಬಹಳ ಪ್ರಾಶಸ್ತ್ಯವಿದೆ. ಜೀವನದಲ್ಲಿ ಸಾತ್ವಿಕತೆಯನ್ನು ಹೆಚ್ಚಿಸಿಕೊಳ್ಳಲು ಜಪಾನುಷ್ಠಾನದಂತಹ ಆಧ್ಯಾಾತ್ಮಿಕ ದಾರಿಯಲ್ಲಿ ಮುನ್ನಡೆಯಬೇಕು. ಇದಕ್ಕೆ ಉಪನಯನ ಸಂಸ್ಕಾಾರ ಸಹಕಾರಿ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಕಡಿಯಾಳಿ ದೇವಸ್ಥಾಾನದ ಶರ್ವಾಣಿ ಮಂಟಪದಲ್ಲಿ ದೇವಸ್ಥಾಾನದ ಜೀರ್ಣೋದ್ಧಾಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿಯವರ ಪುತ್ರ ರಚಿತ್ ಕಿಣಿಯ ಉಪನಯನ ಸಂಸ್ಕಾಾರದ ಜತೆ 19 ವಟುಗಳಿಗೆ ನಡೆದ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಪಾದರು, ತಮ್ಮ ಮಗನ ಉಪನಯನದ ಜತೆ ಇತರರಿಗೂ ಉಪನಯನ ಸಂಸ್ಕಾಾರವನ್ನು ನಡೆಸಿರುವುದು ಉತ್ತಮ ಮಾದರಿ ನಡೆಯಾಗಿದೆ. ಇದರಿಂದ ನಾವೆಲ್ಲ ಒಂದು ಎಂಬ ಸಂದೇಶ ಸಿಗುತ್ತದೆ ಎಂದರು.

ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಗಮಿಸಿ ನೂತನ ವಟುಗಳನ್ನು ಹರಸಿದರು. ಹಿರಿಯ ವಿದ್ವಾಾಂಸ ಡಾಸೋಂದಾ ಭಾಸ್ಕರ ಭಟ್ ಮುಖ್ಯ ಉಪನ್ಯಾಸ ನೀಡಿ ಉಪನಯನ ಸಂಸ್ಕಾಾರದ ಮಹತ್ವವನ್ನು ವಿವರಿಸಿದರು. ಮಂಗಳನಿಧಿ ಕಾರ್ಯಕ್ರಮವನ್ನು ಆರೆಸ್ಸೆಸ್‌ನ ಹಿರಿಯರಾದ ಅಲೆವೂರು ಸಂಜೀವ ನಾಯಕ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಕಡಿಯಾಳಿ ದೇವಸ್ಥಾಾನದ ವ್ಯವಸ್ಥಾಾಪನ ಸಮಿತಿ ಅಧ್ಯಕ್ಷ ಡಾರವಿರಾಜ ಆಚಾರ್ಯ ವಹಿಸಿದ್ದರು. ವೇಮೂ ರಾಜೇಂದ್ರ ಭಟ್ ಉಪಸ್ಥಿಿತರಿದ್ದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಗಣ್ಯರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕೆ.ರಘುಪತಿ ಭಟ್, ಮುನಿಯಾಲು ಉದಯಕುಮಾರ ಶೆಟ್ಟಿಿ ಮೊದಲಾದವರು ಆಗಮಿಸಿ ಶುಭ ಕೋರಿದರು. ಪ್ರಾಾಯೋಜಕರಾದ ಕೆ.ರಾಘವೇಂದ್ರ ಕಿಣಿ ಸ್ವಾಾಗತಿಸಿ ಕೆ.ಸಂತೋಷ್ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಗೌರೀಶ ಶೆಣೈ ವಂದಿಸಿದರು. ರಾಜೇಂದ್ರ ಭಟ್ ಉಪಸ್ಥಿಿತರಿದ್ದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಗಣ್ಯರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕೆ.ರಘುಪತಿ ಭಟ್, ಮುನಿಯಾಲು ಉದಯಕುಮಾರ ಶೆಟ್ಟಿ ,ಜಿಲ್ಲಾ ಬಿ ಜೆ ಪಿ ಆದ್ಯಕ್ಷ ಸುರೇಶ್ ನಾಯಕ್ , ದಾ ಮ ರವೀಂದ್ರ ಮೊದಲಾದವರು ಆಗಮಿಸಿ ಶುಭ ಕೋರಿದರು. ಪ್ರಾಯೋಜಕರಾದ ಕೆ.ರಾಘವೇಂದ್ರ ಕಿಣಿ ಸ್ವಾಾಗತಿಸಿ ಕೆ.ಸಂತೋಷ್ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.  ಎಂ ಐ ಟಿ ಪ್ರಾದ್ಯಾಪಕ ಬಿ ಗೌರವ ಶೆಣೈ ವಂದಿಸಿದರು

 
 
 
 
 
 
 
 
 
 
 

Leave a Reply