ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುವ ಶಿಬಿರ

ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಸ್ಥಾನದ ಆಶ್ರಯದಲ್ಲಿ, ಅದಮಾರು ಮಠದ ಉಭಯ ಶ್ರೀಪಾದರಾದ ಶ್ರೀವಿಶ್ವ ಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀಈಶ ಪ್ರಿಯತೀರ್ಥ ಶ್ರೀಪಾದರ ಶುಭಾಶೀರ್ವಾದ ದೊಂದಿಗೆ, ಗಿರಿಬಳಗ(ರಿ) ಕುಂಜಾರುಗಿರಿ ಇವರು ಆಯೋಜಿಸಿರುವ, ಸಮಸ್ತ ಭಾರತೀಯರಿಗೆ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸುವ ವಿಶೇಷ ಶಿಬಿರವನ್ನು ಶ್ರೀ ಅದಮಾರು ಮಠದ ಅಧಿಕಾರಿಗಳಾದ ನಾಗರಾಜರಾವ್ ಉದ್ಘಾಟಿಸಿದರು.

ದೇವಸ್ಥಾನದ ಪ್ರಬಂಧಕರಾದ ರಾಜೇಂದ್ರ ರಾವ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣರಾಜ ಪುರಾಣಿಕ ಹಾಗೂ ಸುಬ್ರಹ್ಮಣ್ಯ ಉಪಾಧ್ಯಾಯ ಉಪಸ್ಥಿತರಿದ್ದರು.

ಅರ್ಚಕ ರಾಘವೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಗಿರಿ ಬಳಗದ ಅಧ್ಯಕ್ಷರಾದ ನವೀನ್ ಕುಮಾರ್ ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply