ಜಿಲ್ಲಾ ಕಾಂಗ್ರೆಸ್ ಸಭೆ

ರಾಜ್ಯ ಸರಕಾರವು ತನ್ನ 5 ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ˌಶಕ್ತಿ ಯೋಜನೆ, ಗ್ರಹ ಜ್ಯೋತಿˌ ಗೃಹಲಕ್ಷ್ಮಿ ಹಾಗೂ ಯುವ ನಿಧಿ ಇವೆಲ್ಲವನ್ನು ಅತ್ಯಂತ ಯಶಸ್ವಿಯಾಗಿ ರಾಜ್ಯದ ಪ್ರತಿಯೊಂದು ಜನಸಾಮಾನ್ಯರಿಗೆ ತಲುಪಿಸಿ ನುಡಿದಂತೆ ನಡೆದಿದ್ದುˌ ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶವು ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಇದೇ ತಾ 13. 03.2024 ರಂದು ಬುಧವಾರ ಉಡುಪಿಯ ಎಮ್ . ಜಿ .ಎಮ್ ಕಾಲೇಜ್ ಮೈದಾನದಲ್ಲಿ ನಡೆಯಲಿದೆ ˌ ಕಾರ್ಯಕರ್ತರು ಬೂತು ಮಟ್ಟದಲ್ಲಿ ಫಲಾನುಭವಿಗಳನ್ನು ಗುರುತಿಸಿ ಸಮಾವೇಶದಲ್ಲಿ ಭಾಗವಹಿಸುವಂತೆ ತೊಡಗಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.

 ವಿಧಾನ ಪರಿಷತ್ ಸದಸ್ಯರಾದ ಶ್ರೀ . ಮಂಜುನಾಥ್ ಭಂಡಾರಿ ಅವರು ಮಾತನಾಡಿ ಬಡವರಿಗೆ ಆರ್ಥಿಕ ಶಕ್ತಿ ನೀಡುವ ಸಾಮಾಜಿಕ ಹಾಗೂ ಶೈಕ್ಷಣಿಕ ಉನ್ನತಿಗೆ ನೆರವಾಗುವ ಕಾರ್ಯಕ್ರಮಗಳನ್ನು ಜಾರಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ ˌಅಂತಹ ಬದ್ಧತೆ ಇರುವುದು ನಮ್ಮ ಪಕ್ಷಕ್ಕೆ ಮಾತ್ರ ˌ ಗ್ಯಾರಂಟಿ ಯೋಜನೆಗಳನ್ನು ಲೇವಡಿಮಾಡುತ್ತಾ ಈ ಯೋಜನೆಯಿಂದ ಆರ್ಥಿಕತೆ ನಾಶ ಹೊಂದುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯೇ ಈಗ ಮೋದಿ ಗ್ಯಾರಂಟಿ ಎಂದು ಜಪ ಮಾಡುತ್ತಿದೆ ಕಾಂಗ್ರೆಸ್ ಪಕ್ಷದ ಯೋಜನೆಗಳು ಜನರ ಬದುಕಿಗೆ ಆಸರೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಸರಕಾರ ಆಯೋಜಿಸಿದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕೆಂದು ಹೇಳಿದರುˌ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ˌ ಮುಖಂಡರಾದ ಎಮ್.ಎ.ಗಪೂರ್ ಹಿರಿಯಣ್ಣˌ , ಮಲ್ಯಾಡಿ ಶಿವರಾಮ ಶೆಟ್ಟಿ ˌ ದಿನೇಶ್ ಪುತ್ರನ್ ˌ ರಾಜ ಪೂಜಾರಿ ˌ ನೀರೆ ಕೃಷ್ಣಶೆಟ್ಟಿˌ ˌ ಬಿ ನರಸಿಂಹಮೂರ್ತಿˌ ಹರೀಶ್ ಕಿಣಿ ˌ ಬಿಪಿನ್ ಚಂದ್ರ ಪಾಲ್ ನಕ್ರೆ ˌ ವೆರೋನಿಕಾ ಕರ್ನೆಲಿಯೋ ˌ ಗೀತಾ ವಾಗ್ಳೆ ಸರಸು ಬಂಗೆರ ˌ ನವೀನ್ ಚಂದ್ರ ಶೆಟ್ಟಿ ˌ ಹರಿಪ್ರಸಾದ್ ಶೆಟ್ಟಿ ˌ ನವೀನ್ ಚಂದ್ರ ಸುವರ್ಣ ˌ ರಮೇಶ್ ಕಾಂಚನ್ , ಸಂತೋಷ್ ಕುಲಾಲ್ ಸದಾಶಿವ ದೇವಾಡಿಗˌ ಪ್ರಖ್ಯಾತ ಶೆಟ್ಟಿ ˌ ಮಹಾಬಲ ಕುಂದರ್ˌ ಡಾ | ಸುನಿತಾ ಶೆಟ್ಟಿ , ರೇವತಿ ಶೆಟ್ಟಿ ರೋಶನಿ ಒಲಿವರಾˌ ಮಮತಾ ಶೆಟ್ಟಿ , ಕೀರ್ತಿ ಶೆಟ್ಟಿ ˌ ದಿವಾಕರ್ ಕುಂದರ್ˌ ಪ್ರಸನ್ನ ಕುಮಾರ್ ಶೆಟ್ಟಿ ˌ ಕಿರಣ್ ಹೆಗ್ಡೆ ˌ ರೋಶನ್ ಶೆಟ್ಟಿ ˌ ವೈ. ಸುಕುಮಾರ್ ˌ ಕಿಶೋರ್ ಕುಮಾರ್ ಎರ್ಮಾಳ್ ˌ ದಿಲೀಪ್ ಹೆಗ್ಡೆ ˌ ಸುರೇಶ್ ಶೆಟ್ಟಿ ಬನ್ನಂಜೆ ˌ ಶೇಕ್ ವಹಿದ್ ಖಾನ್ ˌ ಬಾಲಕೃಷ್ಣ ಪೂಜಾರಿ ˌ ಜಯ ಕುಮಾರ್ , ಉದ್ಯಾವರ ನಾಗೇಶ್ ಕುಮಾರ್ ˌ ಹರಿಶ್ ಶೆಟ್ಟಿ ಪಾಂಗಾಳ ˌ ಶಶಿಧರ ಶೆಟ್ಟಿ ಎಲ್ಲೂರು ˌ ದೀಪಕ್ ಕೊಟ್ಯಾನ್ ˌ ಆನಂದ ಪೂಜಾರಿ ˌಸತೀಶ್ ಕೊಡವೂರು ˌ ವಿಶ್ವಾಸ್ ಅಮೀನ್ ˌ ಯತೀಶ್ ಕರ್ಕೆರ ˌ ಉಪಸ್ಥಿತರಿದ್ಧರು.

ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಬಿ.ಕುಶಲ ಶೆಟ್ಟಿ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಬ್ಬಾರ್ ಧನ್ಯವಾದವಿತ್ತರು ˌ ಸಹಕಾರಿ ಕಾಂಗ್ರೆಸ್ ನ ಅಧ್ಯಕ್ಷರಾದ ಅಣ್ಟಯ್ಯ ಸೇರಿಗಾರ್ ಹಾಗೂ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply