ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಶಾರ್ವರಿಯ ಚಿಕಿತ್ಸೆಗೆ ರೂ. 2,46,126 ಹಸ್ತಾಂತರ

ಯುವ ಸೇವಾ ಸಂಘ (ರಿ )ಯುವ ಟೈಗರ್ಸ್ ದುಗುಲಿ ಪದವು ಮಂಚಿ ಇದರ ಪರೋಪಕಾರಯ ಪುಣ್ಯಾಯ ಎಂಬ ಯೋಜನೆ ಯೊಂದಿಗೆ ಇಂದು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಶಾರ್ವರಿಯ ಚಿಕಿತ್ಸೆಗೆ ಸುಮಾರು 2,46,126ರೂಪಾಯಿ ಗಳನ್ನೂ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ನಗರ ಸಭಾ ಸದಸ್ಯರಾದ ಚಂದ್ರ ಶೇಖರ್ ಇಂದಿರಾನಗರ, ಮೋಹನ್ ಭಟ್ಅಧ್ಯಕ್ಷರು ದುರ್ಗಾ ಕ್ರೆಡಿಟ್ ಕೋ ಸೊಸಾಯಿಟಿ ಅಲೆವೂರು, ಲೋಕೇಶ್ ದೇವಾಡಿಗ ಮಂಚಿ ಕೆರೆ, ಅಶೋಕ್ ಕೋಟ್ಯಾನ್ ನಿವೃತ ಸೇನಾನಿ ಉಡುಪಿ, ಸುಮತಿ ಸೇರಿಗಾರ್, ಅಶ್ವಿನಿ ಸಾಮಾಜಿಕ ಕಾರ್ಯ ಕರ್ತೆ kmc ಮಣಿಪಾಲ, ಗೌರವ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷ ರಾದ ಶಿವಾನಂದ ಅಮೀನ್, ರಾಮಚಂದ್ರ ಬೈಂದೂರು, ಇವರ ಸಮ್ಮುಖ ದಲ್ಲಿ ಹಸ್ತಾಂತರಿಸಲಾಯಿತು. ವೇಷ ದಾರಿಗಳಾದ ಶ್ರೀಕಾಂತ್ ಅಲೆವೂರು, ಸಂದೇಶ್ ಶೆಟ್ಟಿ, ಬಾಲಕೃಷ್ಣ ಅಮೀನ್, ಸಂದೇಶ್ ಕಟಪಾಡಿ, ಹಾಗೂ ಹೆಚ್ಚು ಹಣ ಸಂಗ್ರಹಿಸಿದ ಸುಮಂತ್, ಮಂಜುನಾಥ್, ಸತೀಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು, ಸಂಘದ ಸರ್ವ ಸದಸ್ಯರು ಭಾಗವಹಿಸಿದರು ವೇಷ ತಯಾರಿಸಿದ ಗಿರೀಶ್ ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯ ಕ್ರಮದ ಕೊನೆಗೆ ಸ್ಥಾಪಕ ಅಧ್ಯಕ್ಷರಾದ ವಿನೋದ್ ಮಂಚಿ ಧನ್ಯ ವಾದ ತಿಳಿಸಿ ನಾಗರಾಜ ವರ್ಕಾಡಿ ನಿರೂಪಣೆ ಮಾಡಿದರು.

 
 
 
 
 
 
 
 
 
 
 

Leave a Reply