ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭ

ಕನ್ನಡ ಜಾನಪದ ಪರಿಷತ್, ಬೆಂಗಳೂರು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಹಾಗೂ ಬಿ. ಡಿ .ಶೆಟ್ಟಿ ಕಾಲೇಜ್ ಆಫ್ ಬಿಸ್ನೆಸ್ ಮ್ಯಾನೇಜ್ ಮೆಂಟ್ ಮಾಬುಕಳ ಬ್ರಹ್ಮಾವರ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ .9 ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಮಾ.6 ಬುಧವಾರ ಜರುಗಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ , ಮಾಬುಕಳ ಮುಖ್ಯಸ್ಥರಾದ ತಾರಾನಾಥ್ ಶೆಟ್ಟಿ, ವಹಿಸಿದ್ದರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕ ಮಾತಾಡಿ,ನಮ್ಮ ಕರಾವಳಿ ಜಿಲ್ಲೆಗಳ ಜಾನಪದ ಕಲೆ ಸಂಸ್ಕೃತಿಯ ವಿಶಿಷ್ಟವಾದದ್ದು ಇಲ್ಲಿಯ ಯಕ್ಷಗಾನ, ಜಾನಪದ ಕುಣಿತಗಳು, ಜಾನಪದ ಆಟಗಳು, ಇವೆಲ್ಲವನ್ನೂ ನಮ್ಮ ಹಿರಿಯರು ಕಟ್ಟೀ ಕೊಟ್ಟಿದ್ದಾರೆ , ಇಂದು ಇಂತಹ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

  ಈ ಸಂದರ್ಭದಲ್ಲಿ ಹೋಳಿ ಕುಣಿತದ ಹಿರಿಯ ಜಾನಪದ ಕಲಾವಿದರಾದ ಮರಿಯ ನಾಯ್ಕ್ ಪೆತ್ರಿ ಅವರನ್ನು ಹಾಗೂ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಶಿರೂರಿಂದ ಬ್ರಹ್ಮಾವಾರ ತಾಲೂಕಿನ ವರೆಗೆ ಕಂಡು ಬರುವ ನಶಿಸಿ ಹೋಗುತ್ತಿರುವ ಈಹೌಂದರಾಯನ ವಾಲಗ್ ಕುಣಿತದ ಹಿರಿಯ ಕಲಾವಿದರಾದ ಗುಂಡು ಪೂಜಾರಿ ಸಾಲಿಗ್ರಾಮ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಂಗಾರಕಟ್ಟೆ ಚೇತನ ಪ್ರೌಡಶಾಲೆಯ ಕು’ ಅಮೂಲ್ಯ , ಕು. ಪಾರ್ವತಿ ಅವರನ್ನು ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಸ್ಮಿತಾ ಮೌಲ್, ಪ್ರಾಂಶುಪಾಲರು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮಾಬುಕಳ ಹಾಗೂ ಚೇತನ ಪ್ರೌಡ ಶಾಲೆ ಮುಖ್ಯೋಪಾದ್ಯಾಯರಾದ ಕಲ್ಪನಾ, ಪ್ರ. ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಸಂ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕವಾ೯ಲು ಉಪಸ್ಥಿತರಿದ್ದರು ಪರಿಷತ್ ಖಜಾಂಚಿ ಹಾಗೂ ಶಿಕ್ಷಕರು ಆದ ಚಂದ್ರ ಹಂಗಾರ ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು ಈ ಸಂದಭ೯ದಲ್ಲಿ ಕಲಾವಿದರಾದ ಮಾಯಾ ಕಾಮತ್ ಮತ್ತು ಕುಸುಮಾ ಕಾಮತ್ ಉಪಸ್ಥಿತರಿದ್ದರು. ಕಾಲೇಜು ಮತ್ತು ಪ್ರೌಡ ಶಾಲೆಯ ಶಿಕ್ಷಕ ವೃಂದದವರು ಸಹಕರಿಸಿದರು.

 
 
 
 
 
 
 
 
 
 
 

Leave a Reply