ಡಾ. ಪಿ. ವಿ. ಭಂಡಾರಿಯವರಿಗೆ “ಗಣಪತಿ ದಿವಾಣ ಸ್ಮಾರಕ ಪುರಸ್ಕಾರ” ಪ್ರದಾನ

ಉಡುಪಿ: ಮೂಡುಬೆಳ್ಳೆ ‘ಧುನಿ’ ಬಯಲು ರಂಗಮಂಟಪದಲ್ಲಿ ಮಾರ್ಚ್ 9ರಂದು ನಡೆದ ಕಾರ್ಯಕ್ರಮದಲ್ಲಿ, ಖ್ಯಾತ ಮನೋವೈದ್ಯರೂ, ಸಾಮಾಜಿಕ ಕಾರ್ಯಕರ್ತರೂ ಆದ ಡಾ. ಪಿ. ವಿ. ಭಂಡಾರಿಯವರಿಗೆ “ಗಡಿಕನ್ನಡ ಹೋರಾಟಗಾರ, ಸಾಹಿತಿ ಗಣಪತಿ ದಿವಾಣ ಸ್ಮಾರಕ ಪುರಸ್ಕಾರ” ನೀಡಿ ಗೌರವಿಸಲಾಯಿತು.

ಹಿರಿಯ ಪತ್ರಕರ್ತರಾದ ಅಮ್ಮೆಂಬಳ ಆನಂದ ಅವರು ಡಾ. ಭಂಡಾರಿಯವರನ್ನು ಸನ್ಮಾನಿಸಿ ಗೌರವಿಸಿದರು.

ನಿವೃತ್ತ ಪ್ರಾಂಶುಪಾಲರಾದ ಪುತ್ತೂರು ಬನ್ನೂರಿನ ಕೆ. ಜಿ. ಭಟ್, ಜನಪರ ಹೋರಾಟಗಾರ, ದಲಿತಪರ ಚಿಂತಕ, ದಸಂಸ ನಾಯಕರಾದ ಜಯನ್ ಮಲ್ಪೆ, ಶರದ್ ಅಮ್ಮೆಂಬಳ, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ದಿವಾಣ ಗೋಪಾಲಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು. ಶ್ರೀರಾಮ ದಿವಾಣ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply