ನಾಯ್ಕನಕಟ್ಟೆ: ಶ್ರೀ ಸುಧೀಂದ್ರ ತೀರ್ಥ ಭಜನಾ ಮಂಡಳಿ ತೆಕ್ಕಟ್ಟೆ ಇವರಿಂದ ಭಜನ್’ಸಂಕೀರ್ತನೆ.

ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ  ಮಾಸದ ‘ಪುತ್ರದ ಏಕಾದಶಿ’ ಪ್ರಯುಕ್ತ ‘ಶ್ರೀ ಸುಧೀಂದ್ರ ತೀರ್ಥ ಭಜನಾ ಮಂಡಳಿ’ ತೆಕ್ಕಟ್ಟೆ ಇವರಿಂದ “ಭಜನ್ ಸಂಕೀರ್ತನೆ” ಕಾರ್ಯಕ್ರಮ ಜರಗಿತು. ವಿಶ್ವಾಸ್ ಪ್ರಭು ಮತ್ತು ಅನಂತ ಪಡಿಯಾರ್ ಹಾರ್ಮೋನಿಯಂ ಹಾಗೂ  ಅನಪ್ ನಾಯಕ್ ಮತ್ತು ಚೇತನ್ ಪ್ರಭು ತಬಲಾ ನುಡಿಸಿದರು. ಅರ್ಚಕ ಶ್ರೀ ಬಾಲಕೃಷ್ಣ ಭಟ್ ಅವರು ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ,ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿದರು.
ಏಕಾದಶಿ ವಿಶೇಷ ಸೇವೆಯನ್ನು ನಾಯ್ಕನಕಟ್ಟೆ ಜಿ.ಎಸ್.ಬಿ ಹತ್ತುಸಮಸ್ತರು ಪ್ರಾಯೋಜಿಸಿದರು. ವೆಂಕಟರಮಣ ಸೇವಾ ಸಮಿತಿಯ ಟ್ರಸ್ಟ್’ನ ಅಧ್ಯಕ್ಷರು‌ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್, ಕಾರ್ಯದರ್ಶಿ ರಮೇಶ್‌ ಪೈ,ಭಜನಾ ಸಂಚಾಲಕ ವಿನಾಯಕ ಕಾಮತ್, ಸಮಿತಿಯ ಸದಸ್ಯರು, ಭಕ್ತವೃಂದದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply