ಗುರು ರಾಘವೇಂದ್ರ ಸ್ವಾಮಿಗಳ ಭಕ್ತಿಗೀತೆ “ಮಂತ್ರಾಕ್ಷತೆ” ಲೋಕಾರ್ಪಣೆ

ತುಳುನಾಡ ಗಾನ ಗಂಧರ್ವ ಜಗದೀಶ್ ಪುತ್ತೂರು ಅವರ ಸಂಗೀತ ಮತ್ತು ಗಾಯನದಲ್ಲಿ, ರೆಡ್ ಎಫ್ ಎಂ ನ ಆರ್ ಜೆ ಪ್ರಸನ್ನ ಅವರ ಸಾಹಿತ್ಯದ ಗುರು ರಾಘವೇಂದ್ರ ಸ್ವಾಮಿಗಳ ಭಕ್ತಿಗೀತೆ “ಮಂತ್ರಾಕ್ಷತೆ”  ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಬಿಡುಗಡೆ ಮಾಡಿದರು.ಜಗದೀಶ್ ಪುತ್ತೂರು ಅವರ ಕಂಠದ ಮಾಧುರ್ಯವನ್ನು ವಿಶೇಷವಾಗಿ ಮೆಚ್ಚಿಕೊಂಡ ಶ್ರೀಗಳು ಮುಂದಿನ ತಿಂಗಳು ಮಂತ್ರಾಲಯದಲ್ಲಿ ನಡೆಯಲಿರುವ ಗುರುರಾಯರ ೩೫೦ ನೇ ಆರಾಧನಾ ಮಹೋತ್ಸವದಲ್ಲಿ ಜಗದೀಶ್ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ವೇದಿಕೆಯಲ್ಲಿ ಘೋಷಣೆ ಮಾಡುವುದರ ಮೂಲಕ ಫಲ ಮಾತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.

ಬೆಂಗಳೂರಿನ ದೂರು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಶ್ರೀಮತಿ ಗೌರಿ ನಾಗರಾಜ್ ಅವರ ಸಹಕಾರದೊಂದಿಗೆ ಈ ಧ್ವನಿ ವಿಡಿಯೋ ಸುರುಳಿ ಬಿಡುಗಡೆಯಾಯಿತು.  ಬಿಡುಗಡೆ ಸಮಾರಂಭದಲ್ಲಿ ಜಗದೀಶ್ ಪುತ್ತೂರು, ಗುರುಗಳ ಅಪೇಕ್ಷೆಯ ಮೇರೆಗೆ 2 ಹಾಡುಗಳನ್ನು ಹಾಡಿದರು. ವೇದಿಕೆಯಲ್ಲಿ ಶ್ರೀ ಮಠದ ವಾದಿರಾಚಾರ್ಯರು , ಛಾಯಾಗ್ರಾಹಕ ಅರುಣ್ ರಾಯ್ , ನಾಗೇಶ್ ವಗ್ಗ ಹಾಗು ಗುರುರಾಜ್ ಉಪಸ್ಥಿತರಿದ್ದರು. ಆರ್ ಜೆ ಪ್ರಸನ್ನ ನಿರೂಪಿಸಿದರು .

ಹಾಡು ಕೇಳಿ ಆನಂದಿಸಿ 

 

 

 
 
 
 
 
 
 
 
 
 
 

Leave a Reply