ಪಾಜಕಕ್ಷೇತ್ರದಲ್ಲಿ ಮಧ್ವನವಮಿಯ ಪ್ರಯುಕ್ತ ಶ್ರೀ ವಿದ್ಯಾವಲ್ಲಭತೀರ್ಥರಿಂದ ಮಹಾಪೂಜೆ

ಪಾಜಕಕ್ಷೇತ್ರದಲ್ಲಿ ಮಧ್ವನವಮಿಯ ಪ್ರಯುಕ್ತ ವಾದಿರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಿತ ಆಚಾರ್ಯ ಮಧ್ವರ ಪ್ರತಿಮೆಗೆ, ಪ್ರಾತಃಕಾಲದಿಂದ ನಿರ್ಮಾಲ್ಯವಿಸರ್ಜನೆ, ಉಷಾಕಾಲ ಪೂಜೆ,ಪಂಚಾಮೃತ ಅಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪಾಜಕದ ಆಡಳಿತದಾರರಾದ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.ಶ್ರೀಪಾದರ ಉಪಸ್ಥಿತಿಯಲ್ಲಿ ಸಂಹಿತ ಯಾಗದ ಪೂರ್ಣಾಹುತಿ, ಅವಭೃತ ಸ್ನಾನ ನಡೆಯಿತು. ಭಕ್ತಾದಿಗಳು ಭಜನೆ,ಪಾರಾಯಣ ನಡೆಸಿದರು. ಈ ಸಂದರ್ಭದಲ್ಲಿ ವಿದ್ವಾಂಸರಾದ ಪ್ರಭಂಜನ ಆಚಾರ್ಯ, ಸಗ್ರಿ ರಾಘವೇಂದ್ರ ಆಚಾರ್ಯ, ಅರ್ಚಕರಾದ ಮಾಧವ ಉಪಾಧ್ಯಾಯ, ಕಲ್ಮಂಜೆ ವಾಸುದೇವ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply