ಕೊಡಗಿನ ಸೋಮವಾರಪೇಟೆಯಿಂದ ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್ಸಿನತ್ತ ಕೊಡಗಿನ ತಿತಿಮತಿ ಎಂಬಲ್ಲಿ ಕಾಡಾನೆಯೊಂದು ಬಂದಿದ್ದು, ಬಸ್ಸಿನ ಮುಂಭಾಗದಲ್ಲಿದ್ದ ಭಗವಾನ್ ಅಯ್ಯಪ್ಪನ ಫೋಟೋದಿಂದ ಹೂವಿನ ಹಾರವನ್ನು ತೆಗೆದು ತನ್ನ ತಲೆಯ ಮೇಲೆ ಇರಿಸಿದೆ. ಬಳಿಕ ಭಕ್ತರಿಗೆ ಯಾವುದೇ ತೊಂದರೆ ಮಾಡದ ಗಜ “ರಾಜನಂತೆ” ತೆರಳಿ ಬಸ್ ಪ್ರಯಾಣ ಮುಂದುವರಿಸಲು ಅನುವು ಮಾಡಿಕೊಟ್ಟಿದೆ. ಈ ದೃಶ್ಯದ ವಿಡಿಯೋ ಸಖತ್ ವೈರಲ್ ಆಗ್ತಿದೆ.