ಉಡುಪಿ: ಜಿಲ್ಲೆಯ ನೀಲಾವರ ಗ್ರಾಮದ ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ಎನ್.ರಘುರಾಮ ಮಧ್ಯಸ್ಥ ಅವರನ್ನು ಅನುವಂಶಿಕ ಮೊತ್ತೇಸರರನ್ನಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 2011 ರ ಸೆಕ್ಷನ್ 20ಎ (1) (ಡಿ)ರ ಅಡಿಯಲ್ಲಿ ಘೋಷಿಸಿ ಆದೇಶಿಸಿದೆ.
ಈಗಾಗಲೇ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದು ಇದೀಗ ಅನುವಂಶಿಕ ಮುಕ್ತೇಸರನಾಗಿ ಆಯ್ಕೆಯಾಗಿದ್ದು , ದೇವಳದ ಭಕ್ತ ಸಮೂಹಕ್ಕೆ ಸಂತಸ ತಂದಿದೆ.