ಉಡುಪಿ ಜಿಲ್ಲಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕಥಾಕಮ್ಮಟ

ಉಡುಪಿಯ ಎಂ.ಜಿ.ಎಂ. ಪದವಿ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ ಕಾಲೇಜಿನ ‘ಕನ್ನಡ ಸಾಹಿತ್ಯ ಸಂಘ’ವು, ‘ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ – ಉಡುಪಿ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಒಂದು ದಿನದ ‘ಕಥಾ ಕಮ್ಮಟ’ವನ್ನು ಹಮ್ಮಿಕೊಂಡಿದೆ.

ಕಥಾಕಮ್ಮಟದಲ್ಲಿ ಹೆಸರಾಂತ ಹಿರಿಯ ಕತೆಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿ ಗಳಿಗೆ ಕತೆ ಬರೆಯಲು ಮಾರ್ಗದರ್ಶನ ನೀಡಲಿದ್ದಾರೆ. ಕಥಾಕಮ್ಮಟವು ನವಂಬರ್ 17 ಶುಕ್ರವಾರ ನಡೆಯಲಿದೆ. ಉಡುಪಿ ಜಿಲ್ಲೆಯ ಕಾಲೇಜಿನಿಂದ ಕತೆ ಬರೆಯುವ ಆಸಕ್ತಿಯಿರುವ ವಿದ್ಯಾರ್ಥಿಗಳು ಹೆಸರನ್ನು ನವೆಂಬರ್ 10 ರ ಒಳಗೆ ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ: ಡಾ. ಪುತ್ತಿ ವಸಂತ ಕುಮಾರ್ , ಕನ್ನಡ ವಿಭಾಗದ ಮುಖ್ಯಸ್ಥರು, 94493 32242, ರವಿರಾಜ ಹೆಚ್.ಪಿ., ಅಧ್ಯಕ್ಷರು, ಕ.ಸಾ.ಪ ಉಡುಪಿ ತಾಲೂಕು. 9845240309
ಇವರನ್ನು ಸಂಪರ್ಕಿಸಬಹುದು

 
 
 
 
 
 
 
 
 
 
 

Leave a Reply