ಉಡುಪಿ ಬನ್ನಂಜೆಯ ಮುಖ್ಯರಸ್ತೆಯಲ್ಲಿರುವ ಶ್ರೀನಾರಾಯಣಗುರು ಸಂಕೀರ್ಣದಲ್ಲಿ ಕೆಮ್ತೂರು ವೇಣುಗೋಪಾಲ ಭಟ್ ಇವರ ಮಾಲಕತ್ವದಲ್ಲಿ ಶ್ರೀ ವರಾಹ (ಸಿವಿಲ್ ಇಂಜಿನಿಯರ್ಸ್ ಆಂಡ್ ಸ್ಟ್ರಕ್ಚರಲ್ ಡಿಸೈನರ್ಸ್) ಎಂಬ ನೂತನ ಕಚೇರಿಯ ಉದ್ಘಾಟನೆ 03.06.2022 ನೇ ಶುಕ್ರವಾರದಂದು ಸಂಜೆ ಗಂಟೆ 3 ಕ್ಕೆ ನಡೆಯಲಿದೆ.
ಉದ್ಘಾಟನೆಯನ್ನು ಎಮ್ ಐ ಟಿ ಮಣಿಪಾಲ ಇದರ ಪ್ರೊಫೆಸರ್ ನಾರಾಯಣ ಶೆಣೈ ಕೆ ಇವರು ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ಎಮ್ ಐಟಿ ಮಣಿಪಾಲ ಇದರ ಪ್ರೊಫೆಸರ್ ಡಾ| ಕಿರಣ್ ಕಾಮತ್, ಎ ಜಿ ಅಸೋಸಿಯೇಟ್ ಇದರ ಮಾಲಕರಾದ ಗೋಪಾಲ ಭಟ್ , ಉಡುಪಿಯ ನ್ಯಾಯವಾದಿ ಕೆ ಆರ್ ರಾಮಚಂದ್ರ ಅಡಿಗ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಡಾ। ಶೇಖ್ ಕಬೀರ್ ಅಹಮದ್ ಇವರು ಭಾಗವಹಿಸಲಿರುವರು.
ಕಟ್ಟಡ ನಿರ್ಮಾಣದ ಯಾವುದೇ ಸಲಹೆಗಾಗಿ ಆರ್ಕಿಟೆಕ್ಟ್ ರಮ್ಯಾ ಆರ್ ಆಚಾರ್ಯ ಲಭ್ಯರಿರುವರು ಎಂದು ಸಂಸ್ಥೆಯ ಮಾಲಕರಾದ ಕೆಮ್ತೂರು ವೇಣುಗೋಪಾಲ್ ಭಟ್ ರವರು ತಿಳಿಸಿರುತ್ತಾರೆ.