ಸುನಿಧಿ ಅಜೆಕಾರು ಅವರಿಗೆ ಗೌರವ

ಅಜೆಕಾರು: ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ ಪುರಸ್ಕ್ರತ ಬಹುಮುಖ ಪ್ರತಿಭೆಯ ಸುನಿಧಿ ಅಜೆಕಾರು ಅವರನ್ನು ಕುಪ್ಪಳ್ಳಿಯಲ್ಲಿ ಭಾನುವಾರ ನಡೆದ ಕುವೆಂಪು ಜಾಗೃತಿ ಕಾರ್ಯಕ್ರಮದಲ್ಲಿ ಸಂಘಟಕ ಬಿ.ನಾಗೇಶ ಅವರು ಸನ್ಮಾನಿಸಿದರು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಮಕ್ಕಳ ವಿಭಾಗದ ಸಂಚಾಲಕನಾಗಿ ಎರಡು ಮಕ್ಕಳ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಸಂಘಟಕರು ಉಲ್ಲೇಖಿಸಿದರು. ಸ್ಮಶಾನದಲ್ಲಿ ಅಮವಾಸ್ಯೆ ದಿನ ಕವಿಗೋಷ್ಠಿ ಆಯೋಜಿಸಿ ನಾಡಿನ ಗಮನಸೆಳೆದಿದ್ದ ಬೆಂಗಳೂರಿನ ಜಾಗೃತಿ ಟ್ರಸ್ಟ್ ಮತ್ತು ರಿಚ್ಮಂಡ್ ಟೌನ್ ರೋಟರಿ ಕ್ಲಬ್ ಜಂಟಿಯಾಗಿ ಎರಡು ದಿನಗಳ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಡಾ.ಮಹೇಶ್ ಜೋಶಿ, ಕಿಮ್ಮನೆ ರತ್ನಾಕರ್, ಅರಗ ಜ್ಞಾನೇಂದ್ರ ಸಹಿತ ಗಣ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply