ಆರಾಧನೆಗೂ ಶ್ರೇಷ್ಠ ಆರೋಗ್ಯಕ್ಕೂ ಉತ್ತಮ ಬಿಲ್ವ – ಪೇಜಾವರ ಶ್ರೀ
ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಇವುಗಳ ಜಂಟಿ ಆಶ್ರಯ ದಲ್ಲಿ ಎಸ್ ಎಮ್ ಎಸ್ .ಪಿ ಸಂಸ್ಕೃತ ಕಾಲೇಜಿನ ಎನ್ಎಸ್ ಎಸ್ ಘಟಕಗಳ ಸಹಯೋಗ ದಲ್ಲಿ ಶ್ರೀ ಕೃಷ್ಣ ಜಯಂತೀ ಪ್ರಯುಕ್ತ ನಾಗರಿ ಕರು ಭಕ್ತರಿಗೆ ಉಚಿತ ಬಿಲ್ವ ಪತ್ರೆ ಸಸಿ ವಿತ ರಣೆ ಕಾರ್ಯಕ್ರಮಕ್ಕೆ ಭಾನುವಾರ ಪೇಜಾ ವರ ಶ್ರೀಗಳು ಚಾಲನೆ ನೀಡಿದರು. ಉಡುಪಿ ನಾಗರಿಕರು ಭಕ್ತರು ಆರಾಧನೆಗೂ , ಆರೋಗ್ಯಕ್ಕೂ ಶ್ರೇಷ್ಠವಾಗಿ ರುವ ಬಿಲ್ವವನ್ನು ಮನೆಮನೆಗಳಲ್ಲಿ ನೆಟ್ಟು ಪೋಷಿಸುವಂತೆ ಕರೆನೀಡಿದರು .

ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ) ರವೀಂದ್ರ ಆಚಾರ್ಯ, ಕಾಲೇಜಿನ ಆಡಳಿತ ಂಮಡಳಿ ಕಾರ್ಯದರ್ಶಿ ದೇವಾ ನಂದ ಉಪಾಧ್ಯಾಯ ಪ್ರಾಚಾರ್ಯ ಡಾ ಎನ್ ಎಲ್ ಭಟ್ ಮಠದ ದಿವಾನ ಎಂ ರಘು ರಾಮಾಚಾರ್ಯ, ಉದ್ಯಮಿ ಯಶ್ ಪಾಲ್ ಸುವರ್ಣ, ದೇವರಾಜ್ ಪಾಣ , ಉಪನ್ಯಾಸ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ವಾಸುದೇವ ಭಟ್ ಪೆರಂಪಳ್ಳಿ ಸಂಯೋ ಜಿಸಿದರು .

ಮಂಗಳವಾರದವರೆಗೆ ಪ್ರತಿ ದಿನ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 6 ವರೆಗೆ ಸಸಿ ವಿತರಣೆ ನಡೆಯಲಿದೆ






