ಹರ್ ಘರ್ ತಿರಂಗಾ ಗೆ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಚಾಲನೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಉಡುಪಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಇಂದು ಹರ್ ಘರ್ ತಿರಂಗಾ ಗೆ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಚಾಲನೆ ನೀಡಿ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣನ ಹಾಗೆ ನಾವೆಲ್ಲಾ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಒಗ್ಗಾಟ್ಟಾಗಿ ಸಮಾಜಕ್ಕಾಗಿ ದುಡಿಯೋಣ, ದೇಶಪ್ರೇಮವನ್ನು ಯುವ ಪೀಳಿಗೆಯಲ್ಲಿ ಬಿತ್ತುವ ಕೆಲಸವನ್ನು ಸಂಘದ ಮುಖೇನ ಮಾಡೋಣ ಎಂದರು, ಸಂಘದ ಸರ್ವ ಸದಸ್ಯರಿಗೆ ರಾಕೇಶ್ ಶೆಟ್ಟಿ ಅವರು ರಾಷ್ಟ್ರ ಧ್ವಜವನ್ನು ನೀಡದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಕ್ಷ್ಮಣ ಕೊಲ್ಕಾರ, ಈರಪ್ಪ ಗೌಂಡಿ, ಮಹೇಶ್ ಗುಂಡಿಬೈಲ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಕೇಶ್ ಶೆಟ್ಟಿ, ಗೋಪಾಲ್ ದೇವದುರ್ಗ, ಅಯ್ಯಪ್ಪ ಮಲ್ಲಾಬಾದಿ, ಶೇಕರ್ ಅಮಲಿಹಾಳ್,ಸಂಜೀವ್ ರೆಡ್ಡಿ ಮಲ್ಲಾಬಾದಿ ಮತ್ತು ಸರ್ವ ಸದಸ್ಯರು ಉಪಸ್ತಿತರಿದ್ದರು.

 
 
 
 
 
 
 
 
 
 
 

Leave a Reply