ಭಾರತ ಜ್ಞಾನವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಸರ್ವ ಸದಸ್ಯರ ಸಮಾವೇಶ

ಭಾರತ ಜ್ಞಾನವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಸರ್ವ ಸದಸ್ಯರ ಸಮಾವೇಶವು19 ನವೆಂಬರ್ 2023 ಭಾನುವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಗೀತಾಂಜಲಿ ಸಭಾಭವನ ಎಂ. ಜಿ. ಎಂ ಕಾಲೇಜು ಉಡುಪಿ ಇಲ್ಲಿ ನಡೆಯಲಿದೆ.
“ಸಂವಿಧಾನದ ನೆಲೆಗಟ್ಟಿನಲ್ಲಿ ವೈಜ್ಞಾನಿಕ ಮನೋಭಾವ” ಎಂಬ ಪರಿಕಲ್ಪನೆಯ ಅಡಿಯಲ್ಲಿ ಈ ಸಮಾವೇಶವು ನಡೆಯಲಿದ್ದು, ಡಾ. ಶ್ರೀನಿವಾಸ ಕಕ್ಕಿಲಾಯ, ತಜ್ಞ ವೈದ್ಯರು ಸಾರ್ವಜನಿಕ ಆರೋಗ್ಯ ಮಂಗಳೂರು ಇವರಿಂದ ಸಮಾವೇಶದ ಮುಖ್ಯ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಮನೋವೈದ್ಯರು ಮತ್ತು ಬಿ.ಜಿ.ವಿ.ಎಸ್ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಡಾ.ಪಿ.ವಿ. ಭಂಡಾರಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜಿವಿಎಸ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಬಾಬು ಟಿ ಎ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಾದ ವಜ್ರಮುನಿ ಮತ್ತು ಟೀಚರ್ ಪತ್ರಿಕೆಯ ಸಂಪಾದಕರಾದ ಉದಯ ಗಾಂವಕಾರ ಇವರು ಭಾಗವಹಿಸಲಿದ್ದಾರೆ.

ಈ ಸಮಾವೇಶದಲ್ಲಿ ಕಟಪಾಡಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ “ಜ್ಞಾನ ವಿಜ್ಞಾನ ಜಿಂದಾಬಾದ್” ನಾಟಕದ ಪ್ರದರ್ಶನವು ನಡೆಯಲಿದೆ. ಹಾಗೆಯೇ, ಬಿ.ಜಿ.ವಿ‌.ಎಸ್ ಪ್ರಕಾಶನ ಮತ್ತು ಪುಸ್ತಕ ಸರಸ್ವತಿ ಗುಲ್ವಾಡಿ ಇವರ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ವಿಜ್ಞಾನ ಶಿಕ್ಷಕರು ಬಿಜಿವಿಎಸ್ ನ ಸರ್ವ ಸದಸ್ಯರು ಮತ್ತು ಆಸಕ್ತ ಸಾರ್ವಜನಿಕರು ಭಾಗವಹಿಸಬಹುದೆಂದು ಬಿಜಿವಿಎಸ್ ಉಡುಪಿ ಜಿಲ್ಲೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply