ದಕ್ಷ ಪೊಲೀಸ್ ಅಧಿಕಾರಿಯ ವರ್ಗಾವಣೆ ಖಂಡನೀಯ ~ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ

ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ. ಪುನರ್ ಪರಿಶೀಲಿಸುವಂತೆ ಜಿಲ್ಲಾ ಸರಕಾರಕ್ಕೆ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಒತ್ತಾಯ

ಉಡುಪಿಯ ನಗರ ಠಾಣೆಯ ದಕ್ಷ ಅಧಿಕಾರಿಯಾಗಿದ್ದ ಶ್ರೀ ಪ್ರಮೋದ್ ಕುಮಾರ್ ಅವರನ್ನು ಕಾಣದ ಕೈಗಳ ಕೈವಾದದಿಂದ ವರ್ಗಾವಣೆ ಮಾಡಿಸಿ ಮೂಲೆಗುಂಪು ಮಾಡಿದ್ದಾರೆ. ಪುಂಡ ಪೋಕರಿಗಳ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದ ಇಂತಹ ಅದೆಷ್ಟೋ ದಕ್ಷ ಅಧಿಕಾರಿಗಳು ಮೂಲೆಗುಂಪಾಗಿದ್ದಾರೆ.

ದಯವಿಟ್ಟು ಸರಕಾರದ ಗಮನಕ್ಕೆ ತರುವುದೇನೆಂದರೆ ದಕ್ಷ ಅಧಿಕಾರಿಗಳ ಕೈಕಟ್ಟಿ ಹಾಕಿ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದೆ ಸ್ವಚ್ಛ ಆಡಳಿತ ನಡೆಸುವಂತಹ ಕೆಲಸ ಮಾಡ ಬೇಕಾಗಿದೆ. ಈಗಾಗಲೇ ವರ್ಗಾವಣೆಗೊಂಡ ಪ್ರಮೋದ್ ಕುಮಾರ್ ಅವರನ್ನು ಮತ್ತೆ ನಗರ ಠಾಣೆಗೆ ಕರೆತಂದು ನಗರವನ್ನು ಅಕ್ರಮ ಚಟುವಟಿಕೆಯಿಂದ ಮುಕ್ತವಾಗಿಸಿ.

ಪ್ರಮೋದ್ ಕುಮಾರ್ ಅವರ ವರ್ಗಾವಣೆ ನಗರದ ಅದೆಷ್ಟೋ ಸಾರ್ವಜನಿಕರ ಮನಸಿಗೆ ನೋವನ್ನುಂಟು ಮಾಡಿದೆ. ದಯವಿಟ್ಟು ನಗರ ವಾಸಿಗಳ ಆಸೆಯನ್ನೀಡೆರಿಸಿ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ ಸರಕಾರವನ್ನು ಒತ್ತಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply