ಪ್ರಗತಿ ಪರ ಕೃಷಿಕ ಮಣೂರು ನರಸಿಂಹ ಅಡಿಗ ಇನ್ನಿಲ್ಲ 

ಪ್ರಗತಿಪರ ಕೃಷಿಕ ಮಣೂರು ನರಸಿಂಹ ಅಡಿಗರು (84)  ಮಂಗಳವಾರ ವಿಧಿವಶರಾದರು. ಮಣೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರು, ಕೋಟ ಸಿ.ಎ ಬ್ಯಾಂಕಿನ ಮಾಜಿ ನಿರ್ದೇಶಕರು ಅಗಿದ್ದ ಶ್ರೀಯುತರು ಪ್ರಗತಿಪರ ಕೃಷಿ ಕರು. ಮಣೂರಿನಲ್ಲಿ  1983ರಲ್ಲೇ ಶೋಭ ಡೈರಿ  ಸ್ಥಾಪಿಸಿ ಹೈನುಗಾರಿಕೆಯಲ್ಲೂ ತನ್ನದೇ ಆದ ಛಾಪು ಮೂಡಿಸಿದವರು.
ಬೆಂಗಳೂರಿನಲ್ಲಿ ಹಲವಾರು ವರ್ಷಗಳ ಕಾಲ ಹೋಟೆಲ್ ಉದ್ಯಮ ನೆಡೆಸಿ ಯಶಸ್ಸು ಸಾಧಿಸಿ ಮರಳಿ ಊರಿಗೆ ಬಂದು ಕಳೆದ 45  ವರ್ಷಗಳಿಂದ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. ಮಹಾಲಿಂಗೇಶ್ವರ ದೇವಸ್ಥಾನ ಮಣೂರು, ಬ್ರಾಹ್ಮಣ ಸಭಾ ಮೊದಲಾದ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಸಮಾಜಮುಖಿ ಕಾರ್ಯಗಳಿಂದ ಜನಮನ್ನಣೆ ಯನ್ನು ಗಳಿಸಿದ್ದರು.
ಡಾ.ಸದಾನಂದ ಅಡಿಗ, ಡಾ.ಸಚ್ಚಿದಾನಂದ ಅಡಿಗ, ಪ್ರಗತಿಪರ ಕೃಷಿಕ ಶಿವಾನಂದ ಅಡಿಗ ಸೇರಿದಂತೆ ಮೂರು ಜನ ಪುತ್ರರು, ಪತ್ನಿ ಸುಶೀಲಮ್ಮ ಮಗಳು ಸುನಂದಾ ಸುರೇಂದ್ರ ಅಡಿಗ ಸೇರಿದಂತೆ ಸೊಸೆಯಂದಿರು. ಮೊಮ್ಮಕ್ಕಳು,  ಅಳಿಯ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಸೇರಿದಂತೆ ಅಸಂಖ್ಯಾತ  ಅಭಿಮಾನಿಗಳನ್ನೂ ಬಂಧು ಬಳಗದವರನ್ನು ಅಗಲಿರುತ್ತಾರೆ. 
 
 
 
 
 
 
 
 
 
 
 

Leave a Reply