ಶ್ರೀ ಹರೀಶ್ ನಾಯಕ್ ಎಲ್ ವಿ ಟಿ ಇವರಿಂದ ತೈಲ ವರ್ಣ ಚಿತ್ರ ಉಡುಗೊರೆ

ಕಲಾ ಶ್ರೀ ಪ್ರಶಸ್ತಿ ಪುರಸ್ಕೃತ ಹೆಸರಾಂತ ಚಿತ್ರ ಕಲಾವಿದ ಶ್ರೀ ಹರೀಶ್ ನಾಯಕ್ ಎಲ್ ವಿ ಟಿ ಇವರು ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಅವರ ತೈಲ ವರ್ಣ ಚಿತ್ರವನ್ನು ಶರನ್ನವ ರಾತ್ರಿಯ ಪರ್ವಕಾಲದಲ್ಲಿ ಉಡುಗೊರೆಯಾಗಿ ನೀಡಿದರು. ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ನೆರವೇರಿದ ಸರಳ ಸಮಾರಂಭದಲ್ಲಿ ರಮಾನಂದ ಗುರೂಜಿಯವರು ಕಲಾವಿದನನ್ನು ಕ್ಷೇತ್ರದ ವತಿಯಿಂದ ಅನುಗ್ರಹ ಪ್ರಸಾದ ನೀಡಿ ಶಾಲುಹೊ ದಿಸಿ ಸ್ಮರಣಿಕೆಯನ್ನೀತ್ತು ಗೌರವಿಸಿದರು. ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಹಾಗು ಭಕ್ತ ಸಮೂಹ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply