ಕುಂದಾಪ್ರ ಕನ್ನಡ ಗಲ್ಫ್ ಬಳಗದಿಂದ ಪತ್ರಕರ್ತರಿಗೆ ಫೇಸ್ ಶೀಲ್ಡ್ ವಿತರಣೆ

ಕುಂದಾಪುರ : ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಬಳಗ ,ದುಬಾಯಿ ವತಿಯಿಂದ ಉಡುಪಿ ಜಿಲ್ಲಾ ಪತ್ರಕರ್ತರಿಗೆ ಕೋವಿಡ್ 19 ರಕ್ಷಣಾತ್ಮಕ ಮುಖ ಗವಸು(ಫೇಸ್ ಶೀಲ್ಡ್ )ಗಳನ್ನು ನೀಡಲಾಯಿತು.

ಬಳಗದ ಪರವಾಗಿ ದುಬಾಯಿ ಉದ್ಯಮಿ ಶೀನ ದೇವಾಡಿಗ ಕೊಡಪಾಡಿ ಮಾತನಾಡುತ್ತಾ ” ಕೋವಿಡ್ ಮಹಾಮಾರಿಯ ಈ ಸಂದಿಗ್ಧ ಸಮಯದಲ್ಲೂ ಸುದ್ದಿಮನೆಯ ರೂವರಿಗಳಾಗಿ ತಮ್ಮ ಕರ್ತವ್ಯ ನಿಭಾಯಿಸುವ ಪತ್ರಕರ್ತರ ಸೇವೆ ಶ್ಲಾಘನೀಯ, ಇವರನ್ನು ಗುರುತಿಸಿ ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಬಳಗದ ವತಿಯಿಂದ ಈ ಕಿರು ಕಾಣಿಕೆಯನ್ನು ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯಾ ಪಾಯ್ಸ್ , ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ,ಉಪಾಧ್ಯಕ್ಷ ಮಝರ್,ಕಾರ್ಯದರ್ಶಿ ನಾಗರಾಜ್ ರಾಯಪ್ಪನ ಮಠ, ಉಪಕಾರ್ಯದರ್ಶಿ ರಾಘು ಬಳಕುರ್ ಉಪಸ್ಥಿತರಿದ್ದು, ಸಂಘದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸಿದರು.

 
 
 
 
 
 
 
 
 
 
 

Leave a Reply