ಉಡುಪಿ ದಸರಾ – ಶಾರದಾ ಮಾತೆಯ ಶೋಭಾಯಾತ್ರೆ

ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ , ಉಡುಪಿ ದಸರಾ ಇದರ 8 ನೇ ವರ್ಷದ ಗೋವಿಂದ ಕಲ್ಯಾಣ ಮಂಟಪ ಅಜ್ಜರಕಾಡು ಪ್ರತಿಷ್ಠಾಪನೆಗೊಂಡ ಶಾರದಾ ಮಾತೆಯ ಶೋಭಾ ಯಾತ್ರೆ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ಸೋಮವಾರ ನೆಡೆಯಿತು . ಯುವ ಉದ್ಯಮಿ ಪಿ ಅಜೇಯ ಶೆಟ್ಟಿ ಶೋಭಾ ಯಾತ್ರೆಗೆ ಚಾಲನೆ ನೀಡಿ ಶುಭ ಹಾರೈಸಿದರು , ಶೋಭಾ ಯಾತ್ರೆಯಲ್ಲಿ ವಿವಿಧ ಕುಣಿತಾ ಭಜನಾ ಮಂಡಳಿಗಳು , ನಾಸಿಕ್ ಬ್ಯಾಂಡ್ , ಚಂಡೆವಾದನ , ಟ್ಯಾಬೋಲೋ ( ಸ್ತಬದ್ಧ ಚಿತ್ರಗಳಾದ ) ಶಿವಾಜಿ ಮಹಾರಾಜ್ , ಈಶ್ವರ ಪಾರ್ವತಿ , ತಟ್ಟೀರಾಯ , ಕೀಲುಕುದುರೆ , ವಿವಿಧ ವೇಷ ಭೂಷಣ ಮೆರವಣಿಗೆಯ ಮೆರಗು ಹೆಚ್ಚಿಸಿದವು ಶೋಭಾ ಯಾತ್ರೆ ಯು ಮಂಗಳವಾದ್ಯ ದೊಂದಿಗೆ ಗೋವಿಂದ ಕಲ್ಯಾಣ ಮಂಟಪ ದಿಂದ ಹೊರಟು ಜೋಡುರಸ್ತೆ , ಬಿಗ್ ಬಜಾರ್ , ಕೆ ಎಮ್ ಮಾರ್ಗ , ತ್ರಿವೇಣಿ ಸರ್ಕಲ್ ,ಸರ್ವಿಸ್ ಬಸ್ ಸ್ಟ್ಯಾಂಡ , ಕಿದಿಯೂರು ಹೋಟೆಲ್ , ಸಿಟಿ ಬಸ್ ನಿಲ್ದಾಣ ದಿಂದ ಮುಂದೆ ಸಾಗಿ ಶ್ರೀ ಶಂಕರ ನಾರಾಯಣ ದೇವಳದ ಪದ್ಮಾ ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು ಧಾರ್ಮಿಕ ಪೂಜಾ ವಿಧಾನಗಳನ್ನು ದಾಮೋಧರ ಭಟ್ ನೇತೃತ್ವದಲ್ಲಿ ಅರ್ಚಕ ವೃಂದದವರು ನೆಡೆಸಿ ಕೊಟ್ಟರು , ಅಂಡಾರು ದೇವಿಪ್ರಸಾದ್ ಶೆಟ್ಟಿ , ಪದ್ಮ ರತ್ನಾಕರ್ , ಲಕ್ಷ್ಮೀ ನಾರಾಯಣ ಮಟ್ಟು , ರಾಧಾಕೃಷ್ಣ ಮೆಂಡನ್ , ತಾರಾ ಆಚಾರ್ಯ , ಸರೋಜಾ ರಾವ್ , ವೀಣಾ ಶೆಟ್ಟಿ , ಉಜ್ವಲ್ ಕಿರಣ , ಸುರೇಶ ಶೇರಿಗಾರ್ , ಹರೀಶ್ ಪುತ್ರನ್ , ಸುಜಾತ , ಸತೀಶ್ ಕುಮಾರ್ , ವೇದಾವತಿ ಶೆಟ್ಟಿ , ಶೋಭಾ ಶೆಟ್ಟಿ ,ಜಯರಾಮ್ ದೇವಾಡಿಗ , ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು , ನೂರಾರು ಭಕ್ತರೂ ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply