ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕುಪೇಟೆ ಉಡುಪಿಯ ಶಾರದಾ ಮೂರ್ತಿಯ ವಿಸರ್ಜನಾ ಪೂಜೆಯನ್ನು ದೇವಳದ ಅರ್ಚಕ ದಯಾಘನ್ ಭಟ್ ನೆರವೇರಿಸಿದರು. ನರಸಿಂಹ ಕಿಣಿ ಬಳಗದವರಿಂದ ಭಜನೆ, ತೆಪ್ಪೋತ್ಸವ , ಮಂಗಳ ವಾದ್ಯ, ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮುಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ಮುರಳೀಧರ್ ಭಟ್ , ಮಟ್ಟಾರ್ ಗಣೇಶ ಕಿಣಿ , ನರಹರಿ ಪೈ, ವಿಶಾಲ್ ಶೆಣೈ, ಶಾಮ್ ಪ್ರಸಾದ್ ಕುಡ್ವಾ , ಪ್ರದೀಪ್ ರಾವ್ , ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.