ಪ್ರಖ್ಯಾತ ತುಳು ಸಿನಿಮಾ ನಟ ನಿರೂಪಕ ರೂಪೇಶ್ ಶೆಟ್ಟಿ ಬೆಂಗಳೂರಿಗೆ ತೆರಳುವ ವೇಳೆ ಕಾರು ಅಪಘಾತ

ಪ್ರಖ್ಯಾತ ತುಳು ಸಿನಿಮಾ ನಟ , ನಿರ್ದೇಶಕ , ರೇಡಿಯೋ ಜಾಕಿ , ನಿರೂಪಕ ರೂಪೇಶ್ ಶೆಟ್ಟಿ ಸಿನಿಮಾದ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುವ ವೇಳೆ ಅವರ ಕಾರು ಶಿರಾಡಿ ಘಾಟಿಯಲ್ಲಿ ಅಪಘಾತವಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ರೂಪೇಶ್ ಪ್ರಾಣಾಪಾಯದಿಂದ ಪಾರಾಗಿದ್ದು ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನನ್ನ ಹೊಸ ತುಳು ಸಿನಿಮಾ ಗಮ್ಜಾಲ್ ನ ಕೆಲಸದಲ್ಲಿ ಸದ್ಯ ಬಿಝಿ ಇದ್ದೆ ಅದರ ಕೆಲಸದ ನಿಮಿತ್ತ ಬೆಂಗಳೂರಿಗೆ ಹೊರಡುವ ದಾರಿಯಲ್ಲಿ ಅವಘಡ ಸಂಭವಿಸಿದೆ.  ಸಣ್ಣಪುಟ್ಟ ಗಾಯಗಳಾಗಿವೆ ದಯವಿಟ್ಟು ಯಾರು ಗಾಬರಿಯಾಗಬೇಡಿ.  ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಅವರನ್ನು ಸಂಪರ್ಕಿಸಿದಾಗ ರೂಪೇಶ್ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply