ಪ್ರಖ್ಯಾತ ತುಳು ಸಿನಿಮಾ ನಟ , ನಿರ್ದೇಶಕ , ರೇಡಿಯೋ ಜಾಕಿ , ನಿರೂಪಕ ರೂಪೇಶ್ ಶೆಟ್ಟಿ ಸಿನಿಮಾದ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುವ ವೇಳೆ ಅವರ ಕಾರು ಶಿರಾಡಿ ಘಾಟಿಯಲ್ಲಿ ಅಪಘಾತವಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ರೂಪೇಶ್ ಪ್ರಾಣಾಪಾಯದಿಂದ ಪಾರಾಗಿದ್ದು ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ನನ್ನ ಹೊಸ ತುಳು ಸಿನಿಮಾ ಗಮ್ಜಾಲ್ ನ ಕೆಲಸದಲ್ಲಿ ಸದ್ಯ ಬಿಝಿ ಇದ್ದೆ ಅದರ ಕೆಲಸದ ನಿಮಿತ್ತ ಬೆಂಗಳೂರಿಗೆ ಹೊರಡುವ ದಾರಿಯಲ್ಲಿ ಅವಘಡ ಸಂಭವಿಸಿದೆ. ಸಣ್ಣಪುಟ್ಟ ಗಾಯಗಳಾಗಿವೆ ದಯವಿಟ್ಟು ಯಾರು ಗಾಬರಿಯಾಗಬೇಡಿ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಅವರನ್ನು ಸಂಪರ್ಕಿಸಿದಾಗ ರೂಪೇಶ್ ತಿಳಿಸಿದ್ದಾರೆ