ಉಡುಪಿ ಸೀರೆಯುಟ್ಟು ಮಣಿಪಾಲದ ವಿಪಂಚಿ ಬಳಗ ಆಯೋದ್ಯೆಯಲ್ಲಿ ವೀಣಾ ವಾದನ

ಮಣಿಪಾಲದ ವಿದುಷಿ ಪವನ ಬಿ ಆಚಾರ್ ಇವರ ನೇತೃತ್ವದ ವಿಪಂಚಿ ಬಳಗ ಅಯೋಧ್ಯೆಯಲ್ಲಿ ಪಂಚ ವೀಣಾ ವಾದನವನ್ನು ನುಡಿಸಿ ದಾಖಲೆಯನ್ನು ನಿರ್ಮಿಸಿದೆ. ಪಂಚವೀಣಾ ವಾದನ ಸಮೂಹ ವೀಣಾ ವಾದನಕ್ಕೆ ಹೆಸರುವಾಸಿಯಾದ ವಿಪಂಚಿ ಬಳಗ ಹಾಗೂ ಕಲಾಸ್ಪಂದನದ ಸದಸ್ಯರು ಮಾರ್ಚ್ 9ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ವೀಣಾ ವಾದನ ಸೇವೆಯನ್ನು ಸಲ್ಲಿಸಿದರು. ಸೂರ್ಯೋದಯದ ಸಮಯದಲ್ಲಿ ಶ್ರೀ ರಾಮ ದೇವರ ಉತ್ತರ ದಿಕ್ಕಿನಲ್ಲಿ ಯಾಗದ ಸಮಯದಲ್ಲಿ. ಸಾಯಂಕಾಲ ಅಷ್ಟಾವಧಾನ ಸೇವೆಯಲ್ಲಿ ಹಾಗೂ ಗೋಧೂಳಿ ಸಮಯಕ್ಕೆ ಶ್ರೀ ರಾಮ ಮಂದಿರದ ಒಳಗಿನ ಶ್ರೀ ರಾಮ ಲಲ್ಲಾ ರಾಗ ಸೇವಾ ವೇದಿಕೆಯಲ್ಲಿ ತ್ರಿಕಾಲದಲ್ಲಿ ವೀಣಾ ವಾದನ ನಡೆಸಿ ಅಪಾರ ಭಕ್ತರ ಮನ ಸೂರೆಗೊಂಡರು. ವೀಣಾ ತಂಡದಲ್ಲಿ. ಪವನ ಬಿ ಆಚಾರ್. ಶಶಿಕಲಾ ಭಟ್. ತಂಡದ ಸದಸ್ಯೆ ಹಾಗೂ ಉಡುಪಿ ಸೀರೆಯ ರೂಪದರ್ಶಿ ಶಿಲ್ಪಾ ಜೋಶಿ. ಸುಮಂಗಲಾ ಹೆಬ್ಬಾರ್. ಕೌಸ್ತುಭ ರಾವ್ . ಉಪಸ್ಥಿತರಿದ್ದರು. ಡಾಕ್ಟರ್ ಬಾಲಚಂದ್ರ ಆಚಾರ್ ಮೃದಂಗ ವಾದನದಲ್ಲಿ ಹಾಗೂ ಮೇಧಾ ಭಟ್ ಮತ್ತು ಪ್ರಸಾದ್ ರಾವ್ ಇತರ ಸಹಕಾರ ನೀಡಿದರು.

 
 
 
 
 
 
 
 
 
 
 

Leave a Reply