ಇಂಟರ್‌ನ್ಯಾಷನಲ್ ರಿಲೇಶನ್ಸ್ ಫ್ರಂ ಇಂಡಿಯನ್ ಪ್ರಾಸ್ಪೆಕ್ಟಿವ್’ ವಿಶೇಷ ಉಪನ್ಯಾಸ

ಅಂತರಾಷ್ಟ್ರೀಯ ಸಂಬಂಧಗಳ (ಐಆರ್ಪಾಶ್ಚಿಮಾತ್ಯೇತರ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಮತ್ತು ಭಾರತವು ಅಂತರಾಷ್ಟ್ರೀಯ ಸಂಬಂಧಗಳ ಕುರಿತು ತನ್ನದೇ ಆದ ದೃಷ್ಟಿಕೋನ ವನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮಾಹೆಯ ಜಿಯೋಪಾಲಿಟಿಕ್ಸ್ ವಿಭಾಗದ ಮುಖ್ಯಸ್ಥೆ  ಪ್ರೊ.ಕೆ.ಪಿ.ವಿಜಯಲಕ್ಷ್ಮಿ ಹೇಳಿದರು

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ಆಶ್ರಯದಲ್ಲಿ ನಡೆದ ‘ಟ್ರೇಸಿಂಗ್ ದಿ ಟ್ರಾಜೆಕ್ಟರಿಇಂಟರ್ನ್ಯಾಷನಲ್ ರಿಲೇಶನ್ಸ್ ಫ್ರಂ ಇಂಡಿಯನ್ ಪ್ರಾಸ್ಪೆಕ್ಟಿವ್‘ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.

ನಾನ್ವೆಸ್ಟರ್ನ’ ಎಂದರೆ ಪಾಶ್ಚಿಮಾತ್ಯ ವಿರೋಧಿ ಎಂದಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾ, ಅಲಿಪ್ತ ನೀತಿಯು ಅಂತರಾಷ್ಟ್ರೀಯ ಸಂಬಂಧಗಳ(ಐಆರ್) ಜಗತ್ತಿಗೆ ಭಾರತದ ಪ್ರಮುಖ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.   

ಐಆರ್ ವಿಕಾಸದ ವಿವಿಧ ಹಂತಗಳನ್ನು ವಿವರಿಸುತ್ತಾಪ್ರೊವಿಜಯಲಕ್ಷ್ಮಿ ಐಆರ್ ಎರಡನೇ ಮಹಾಯುದ್ಧದ ನಂತರ ಪ್ರಾಥಮಿಕವಾಗಿ ಯುದ್ಧಗಳನ್ನು ತಪ್ಪಿಸಲು ಆರಂಭವಾದ ಶೈಕ್ಷಣಿಕ ವಿಭಾಗವಾಗಿದೆಐಆರ್ ಸಿದ್ಧಾಂತಿಗಳು ವಾಸ್ತವಿಕತೆ ಮತ್ತು ಆದರ್ಶವಾದದ ನಡುವೆ ಸಿಲುಕಿಕೊಂಡಿದ್ದಾರೆಇಂದುಐಆರ್ ಅಧ್ಯಯನದಲ್ಲಿ ವಿವಿಧ ಕಲೆಗಳನ್ನು “ಸಾಫ್ಟ್ ಪವರ್” ಎಂದು ಪರಿಗಣಿಸಬಹುದು ಎಂದು ಅವರು ಗಮನಿಸಿದರು

ಇದಕ್ಕೂ ಮೊದಲು ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊವರದೇಶ್ ಹಿರೇಗಂಗೆ,  ಆಂತರಿಕ ಶಾಂತಿಯಿಂದ ಅಂತರರಾಷ್ಟ್ರೀಯ ಶಾಂತಿಯವರೆಗೆ ಸಾಗಲು ಕಲಾಪ್ರಕಾರಗಳು  ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಮ್ಮ ವಿಭಾಗವು ಪರಿಶೋಧಿಸುತ್ತದೆ ಎಂದು ಹೇಳಿದರು.  

ರಾಜಕೀಯ ಶಾಸ್ತ್ರಜ್ಞ ಡಾ.ರಾಜಾರಾಂ ತೋಳ್ಪಾಡಿ ಅವರು ಮಾತನಾಡಿ ಐಆರ್ನಲ್ಲಿ ವಾಸ್ತವಿಕತೆಯ ಹೊರತಾಗಿ ವಿಭಿನ್ನ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.  ಜಿಸಿಪಿಎಎಸ್  ಮತ್ತು ಡಿಜಿಐರ್ಮಾಹೆಯ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.  

 
 
 
 
 
 
 
 
 
 
 

Leave a Reply