​ಪಿ.ಪಿ.ಸಿ.ಯಲ್ಲಿ ಅಂಚೆಚೀಟಿ ಪ್ರದರ್ಶನ

ಪಿ.ಪಿ.ಸಿ. : ಅಂಚೆಚೀಟಿ ದಿನದ ಪ್ರಯುಕ್ತ ಪೂರ್ಣಪ್ರಜ್ಞ ಕಾಲೇಜಿನ ಸ್ಪಿಕರ್ಸ್  ಕ್ಲಬ್ ಹಾಗೂ ಉಡುಪಿ ಅಂಚೆ ಘಟಕದ ಜಂಟಿ ಆಯೋಜನೆಯಲ್ಲಿ ಅಂಚೆಚೀಟಿ ಪ್ರದರ್ಶನವನ್ನು ಸಂಯೋಜಿಸಲಾಯಿತು.
ಕಾರ್ಪೋರೇಶನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳಾಗಿರುವ ಎಂ.ಕೆ ಕೃಷ್ಣಯ್ಯ ನವರು ಸಂಗ್ರಹಿಸಿದ ಸುಮಾರು ೧೦೦೦ ಕ್ಕೂ ಹೆಚ್ಚು ಅಂಚೆಚೀಟಿಗಳ ಪ್ರದರ್ಶನ ನೆಡೆಯಿತು. ಈ ಪ್ರಯುಕ್ತ ನಡೆಸಿದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಎಂ.ಕೆ.ಕೃಷ್ಣಯ್ಯ ನವರು “ಅಂಚೆ ಚೀಟಿ ಸಂಗ್ರಹಣೆ ಒಂದು ಉತ್ತಮ ಹವ್ಯಾಸ, ವಿದ್ಯಾರ್ಥಿಗಳ ದೆಸೆಯಲ್ಲಿ ಸಮಯಪಾಲನೆಗೆ ಒಂದು ಉತ್ತಮ ಮಾಧ್ಯಮ”ಎಂದು ಅಭಿಪ್ರಾಯಪಟ್ಟರು.
 ಈ ಕಾರ್ಯಕ್ರಮದಲ್ಲಿ ಅಂಚೆ ಚೀಟಿ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ಅಂಚೆ ಅಧೀಕ್ಷಕರು ಶ್ರೀ ರಮೇಶ ಪ್ರಭು, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್., ಸ್ಪೀಕರ್ ಕ್ಲಬ್‌ನ ಸಂಘಟಕರಾಗಿರುವ ಡಾ. ಸೌಜನ್ಯ ಶೆಟ್ಟಿ, ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಅಪೂರ್ವ ಮೇರಿ ಓಸ್ಟ ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕು. ಅನುಷಾ ಸಿ.ಹೆಚ್ ಕಾರ್ಯಕ್ರಮವನ್ನು ನಿರೂಪಿಸಿ ಜೆಸ್ಮಿತಾ ಸ್ವಾಗತಿಸಿದರು ಹಾಗೂ ಸನೀಫಾ ವಂದಿಸಿದರು, .
 
 
 
 
 
 
 
 
 
 
 

Leave a Reply