ರಾಷ್ಟ್ರೀಯ ಸಮುದಾಯ ಬಾನುಲಿ ಸಂಘಕ್ಕೆ  ಶಿವಶಂಕರ್ ಆಯ್ಕೆ

ಸಮುದಾಯದ ಅಭಿವೃದ್ದಿಗಾಗಿ ಭಾರತದ್ಯಂತ ಸಮುದಾಯ ಬಾನುಲಿಗಳು ಕಾರ್ಯನಿರ್ವಾಹಿಸುತ್ತಿವೆ . ಭಾರತದಲ್ಲಿ ಸುಮಾರು 440 ಸಮುದಾಯ ಬಾನುಲಿಗಳಿದ್ದು, ಇತ್ತೀಚೆಗೆ  ದೆಹಲಿಯಲ್ಲಿ ನಡೆದ ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ನ
 2023-’25 ನೇ ಸಾಲಿನ  ಚುನಾವಣೆಯಲ್ಲಿ ,ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ  ಮೈರಾಡ ಸಂಸ್ಥೆ ನಡೆಸುತ್ತಿರುವ ‘ನಮ್ಮ ಧ್ವನಿ’ ಸಮುದಾಯ  ಬಾನುಲಿ ಕೇಂದ್ರದ  ಕಾರ್ಯಕ್ರಮ ಅಧಿಕಾರಿ ಶಿವಶಂಕರಸ್ವಾಮಿ ಅವರು  ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ನ ದಕ್ಷಿಣವಲಯದ  ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿದ್ದರು. ಪ್ರಸ್ತುತ ಇವರು  ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ನ ಕರ್ನಾಟಕ ಶಾಖೆಯ ಗೌರವಾಧ್ಯಕ್ಷರೂ ಆಗಿದ್ದಾರೆ.
 
 
 
 
 
 
 
 
 
 
 

Leave a Reply