ಒಬ್ಬರ ನೋವಿಗೆ ಸ್ಪಂದಿಸುವ ಗುಣ ಕೇವಲ ಮನುಷ್ಯ ಜೀವಿಯಲ್ಲಿ ಮಾತ್ರ ~ಬಿ.ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ತುಳುಕೂಟದ ವತಿಯಿಂದ ಸೋಮವಾರ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾದ ಸ್ನೇಹಕೂಟದಲ್ಲಿ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸಮ್ಮಾನಿಸಲಾಯಿತು.

​​ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಜಯಕರ ಶೆಟ್ಟಿಯವರು ​ಒಬ್ಬರ ನೋವಿಗೆ ಇನ್ನೊಬ್ಬರು ಸ್ಪಂದಿಸುವ ಗುಣವನ್ನು ಕೇವಲ ಮನುಷ್ಯರಿಗೆ ಮಾತ್ರ ದೇವರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದ ಸೇವೆಯನ್ನು ಸಮಾಜದಲ್ಲಿರುವ ​ಅರ್ಹರಿಗೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂ​ದರು.

ಪತ್ರ​ಕ​​ತ್ರ  ಶ್ರೀಕಾಂತ್ ಶೆಟ್ಟಿ  ಅಭಿನಂದನಾ ಭಾಷಣ ಮಾಡಿದರು​. ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಚೈತನ್ಯ, ಹಿರಿಯ ನ್ಯಾಯವಾದಿ ಶಾಂತರಾಮ ಶೆಟ್ಟಿ,​ ಲಯನ್ಸ್ ಗವರ್ನರ್ ವಿಶ್ವನಾಥ್ ಶೆಟ್ಟಿ,​ ತುಳು ಅಕಾಡೆಮಿಯ ಸದಸ್ಯೆ ತಾರಾ ಆಚಾರ್ಯ, ​ ​ ಸಂಧ್ಯಾ ಶೆಣೈ ,​ ಸಂಧ್ಯಾ ಮಲಬಾರ್ ಗೋಲ್ಡ್  ನ ಹಫೀಜ್ ರೆಹೆಮಾನ್, ತೋನ್ಸೆ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.


​ ​  ತು​​ಳು ಕೂಟದ ಉಪಾಧ್ಯಕ್ಷ ಮುಹ್ಮಮದ್ ಮೌಲಾ ಸ್ವಾಗತಿಸಿ​, ಪ್ರಸ್ತಾವನೆಗೈದರು. ಯಶೋದಾ ಕೇಶವ್ ಪ್ರಾರ್ಥಿಸಿದರು, ರತ್ನಾಕರ್ ಇಂದ್ರಾಳಿ ನಿರೂಪಿಸಿದರು.
 
 
 
 
 
 
 
 
 
 
 

Leave a Reply