ಭಾನುವಾರದಂದು ಲೇಖಕ ಡಾ. ವಿರೂಪಾಕ್ಷ ದೇವರ ಮನೆಯವರ ಎರಡು ಕೃತಿ ಲೋಕಾರ್ಪಣೆ:

29.10.2023 ರ ಭಾನುವಾರದಂದು ಸಂಜೆ 5.00 ಗಂಟೆಗೆ, ನೂತನ ರವೀಂದ್ರ ಮಂಟಪ, ಎಂ.ಜಿ.ಎಂ, ಕಾಲೇಜು, ಉಡುಪಿ ಇಲ್ಲಿ ಡಾ. ವಿರೂಪಾಕ್ಷ ದೇವರ ಮನೆಯವರು ಬರೆದಿರುವ “Did you talk to your child today” ಮತ್ತು ಕಣ್ಣಿಗೆ ಕಾಣುವ ದೇವರು, ಎರಡು ಪುಸ್ತಕಗಳ ಲೋಕಾರ್ಪಣೆ ನಡೆಯಲಿದೆ.
 ಈ ಕಾರ್ಯಕ್ರಮದಲ್ಲಿ ಯಂಡಮೂರಿ ವೀರೇಂದ್ರನಾಥ್ ರವರು “ಪೋಷಕರು ೬ ಬಗೆ ನೀವು ಯಾರು ?’ ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ, ಗ್ರಾಂಡ್ ಮಾಸ್ಟರ್ ಅಫ್ಘಾನ್ ಕುಟ್ಟಿ, ರವರಿಂದ “ಅಂತರ್ಜಾಲವ್ಯಸನದಿಂದ ರೂಬಿಕ್ ಕ್ಯೂಬ್ ನ ಇಂದ್ರಜಾಲದತ್ತ’ ಎಂಬ ವಿಷಯದ ಕುರಿತು ಮಾಹಿತಿ ನೀಡಲಿದ್ದಾರೆ.
 ಕಾರ್ಯಕ್ರಮದಲ್ಲಿ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ.ಭಂಡಾರಿಯವರು, ಒನ್ ಗುಡ್ ಸ್ಟೈಪ್ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕರು ಮತ್ತು ಟ್ರಸ್ಟಿಯಾದ ಶ್ರೀಮತಿ ಅಮಿತಾ ಪೈ ಮತ್ತು ಸಾವಣ್ಯ ಪ್ರಕಾಶಕರಾದ ಶ್ರೀ ಜಮೀಲ್‌, ಸಾವಣ್ಯ ಬೆಂಗಳೂರು ಇವರು ಉಪಸ್ಥಿತರಿರುತ್ತಾರೆ.
 
 
 
 
 
 
 
 
 
 
 

Leave a Reply