ಕ್ರಿಕೆಟ್ ಪಂದ್ಯಕೂಟದಲ್ಲಿ ಸುಶಾಂತ್ ರಾಜ್ ಬಿರ್ತಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಇತ್ತೀಚೆಗೆ ಚಿಕ್ಕೋಡಿಯ ಮೂಡಲಗಿಯಲ್ಲಿ ನಡೆದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಮಟ್ಟದ 17ರ ವಯೋಮಾನದ ಒಳಗಿನವರ ಕ್ರಿಕೆಟ್ ಪಂಧ್ಯಾಕೂಟದಲ್ಲಿ ಮೈಸೂರು ವಿಭಾಗಮಟ್ಟವನ್ನು ಪ್ರತಿನಿಧಿಸಿದ ಎಸ್.ಎಮ್.ಎಸ್.ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆ ಬ್ರಹ್ಮಾವರ ಇದರ 9ನೇ ತರಗತಿಯ ವಿಧ್ಯಾರ್ಥಿ ಸುಶಾಂತ್ ರಾಜ್ ಬಿರ್ತಿ ಇವರು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ರಾಷ್ಟ್ರ ಮಟ್ಟದಲ್ಲಿ ಇವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.ಇವರು ಬ್ರಹ್ಮಾವರದ ಶ್ಯಾಮರಾಜ್ ಬಿರ್ತಿ ಮತ್ತು ಸುಮನ ದಂಪತಿಯವರ ಪುತ್ರರಾಗಿದ್ದಾರೆ.ಇವರು ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂಧ್ಯಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾರೆ.

 
 
 
 
 
 
 
 
 
 
 

Leave a Reply