ಉಡುಪಿ :- ಬಹುಮುಖ ಪ್ರತಿಭೆಯ ರಂಗ ನಟ , ಕಲಾವಿದರಾದ ರಾಜೇಶ್ ಭಟ್ ಪಣಿಯಾಡಿ ಯವರಿಗೆ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೇಸಿಐ ವಲಯ 15 ರ ವತಿಯಿಂದ ವಲಯ ವ್ಯವಹಾರ ಸಮ್ಮೇಳನ ಸಂಚಲನ ಕಾಯ೯ಕ್ರಮದಲ್ಲಿ ವಲಯಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ಬೆಳ್ಮಣ್ಣು ನಲ್ಲಿ ನಡೆದ ಈ ಕಾಯ೯ಕ್ರಮದಲ್ಲಿ ವಲಯ ವ್ಯವಹಾರ ನಿದೇ೯ಶಕ ಸವ೯ಜ್ಞ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದಭ೯ದಲ್ಲಿ ಪೂವ೯ ವಲಯಾಧ್ಯಕ್ಷ ಅರವಿಂದ ರಾವ್ ಕೆದಿಗೆ, ಸೌಜನ್ಯ ಹೆಗ್ಡೆ, ವಲಯ ಉಪಾಧ್ಯಕ್ಷ ಹರೀಶ್ ಶೇಟ್, ಘಟಕ ಮತ್ತು ವಲಯಾಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ್ ಭಟ್ ರವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ರಂಗ ನಟರಾಗಿ ಉತ್ತಮ ಹೆಸರು ಮಾಡಿದ್ದಾರೆ.