ಡಾ.ಗಣೇಶ್, ರೇಣುಕಾ ಮತ್ತು ಅಶ್ವಿನಿಯವರಿಗೆ ರಾಷ್ಟ್ರೀಯ ಪುರಸ್ಕಾರ

ಗೋವಾ ರಾಜ್ಯದ ಪಣಜಿ ಕನ್ನಡ ಸಂಘ ಮತ್ತು ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಸಮಾಜ ಮುಖಿ ಸಂಸ್ಥೆ (ರಿ) ಇವರು ಪಣಜಿಯ ಮಾರ ಮಾರ್ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ, ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.

 

ಸುಗಮ ಸಂಗೀತ ಮತ್ತು ಸಂಘಟನಾ ಕ್ಷೇತ್ರದಲ್ಲಿನ 32 ವರ್ಷದ ವಿಶೇಷ ಸೇವೆಯನ್ನು ಗುರುತಿಸಿ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಮತ್ತು ಯುವ ಗಾಯಕಿ ಹಾಗೂ ಉಪನ್ಯಾಸಕಿ ಕುಮಾರಿ ಅಶ್ವಿನಿ ಸುವರ್ಣ ಕಂಚಿನಡ್ಕ ಪಡುಬಿದ್ರೆ ಮತ್ತು ಕಿರು ತೆರೆಯ ನಟಿ ಶ್ರೀಮತಿ ರೇಣುಕಾ ಶಿಕಾರಿ ಶಿವಮೊಗ್ಗ ಇವರ ಕಲಾ ಸೇವೆಯನ್ನು ಗುರುತಿಸಿ ಶ್ರೀ ಶ್ರೀ ವಿದ್ಯಾನಂದ ಸ್ವಾಮೀಜಿ ಕಣವಿ ಹೊನ್ನಾಪುರ ಇವರು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.

ಸಂಘಟಕರಾದ ಶ್ರೀ ಮಂಜುನಾಥ ಶಿವಕ್ಕನವರ್ ಕಾರ್ಯಕ್ರಮ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply