ಡಾ.ಗಣೇಶ್ ಗಂಗೊಳ್ಳಿ ಬಗಲಿಗೆ “ಜಾನಪದ ಕೋಗಿಲೆ” ರಾಜ್ಯ ಪ್ರಶಸ್ತಿ

ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಬೆಂಗಳೂರು ಹಾಗೂ ಶ್ರೀಮತಿ ಲಕ್ಷ್ಮೀ ಬಾಯಿ ಮತ್ತು ಕಲ್ಲಪ್ಪ ಉದಗಟ್ಟಿ  ಸಾಮಾಜಿಕ ಪ್ರತಿಷ್ಠಾನ ಬೆಳಗಾವಿ ಇವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ  ಜಂಟಿಯಾಗಿ ಆಯೋಜಿಸಿದ ವಿವಿಧ ಕ್ಷತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ  ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಜಾನಪದ ಗಾಯಕರು ಹಾಗೂ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಜಾನಪದ ಸಂಗೀತ ಹಾಗೂ ಸಂಘಟನಾ ಕ್ಷೇತ್ರದಲ್ಲಿನ  ವಿಶಿಷ್ಟ ಸೇವೆಯನ್ನು ಗುರುತಿಸಿ ಬೆಂಗಳೂರಿನ  ಶ್ರೀ ವಿದ್ಯಾ ಮಹಾ ಸಂಸ್ಥಾನದ  ಶ್ರೀ ಶ್ರೀ ಶ್ರೀ ಯೋಗಿನಿ ಮಾತಾರವರು  ಕರ್ನಾಟಕ ಜಾನಪದ ಕೋಗಿಲೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು
ಈ ಸಂದರ್ಭದಲ್ಲಿ ಡಾ.ಬಾಳಾಸಾಹೇಬ ಉದಗಟ್ಟಿ  ಬೆಳಗಾವಿ,  ಕುಮಾರಿ ನಿತ್ಯ ಬೆಂಗಳೂರು  ಹಾಗೂ ಇನ್ನಿತರರು ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply