​ಉಡುಪಿ ತೆಂಕಪೇಟೆ ಎಲ್ ವಿಟಿ:  ವೈಭವದ ವಿಶ್ವ ರೂಪ ದರ್ಶನ

ಉಡುಪಿ ತೆಂಕಪೇಟೆ  ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ  ಜಿ ಎಸ್ ಬಿ  ಸಮಾಜ ಯುವಕ , ಹಾಗೂ  ಮಹಿಳಾ ಮಂಡಳಿಯ ಆಶ್ರಯದಲ್ಲಿ ,  ಕಾರ್ತಿಕ ಮಾಸದ ಏಕಾದಶಿ  ಅಂಗವಾಗಿ ಗುರುವಾರ ಭಜನಾ ಕಾರ್ಯಕ್ರಮ,  ಇಂದು  ಶುಕ್ರವಾರ ಮುಂಜಾನೆ ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವರೂಪ ದರ್ಶನ ನೆರವೇರಿತು.
 

ಈ  ಬಾರಿಯ ವಿಶೇಷ ಆಕರ್ಷಣೆಯಾಗಿ  ಶ್ರೀ ರಾಮ ದರ್ಶನ , ವೀರ ವಿಠಲ, ಶ್ರೀ ಕೃಷ್ಣ, ಗಜವದನ, ಈಶ್ವರ, ಮುಖ್ಯಪ್ರಾಣ ಹಾಗೂ ರಂಗೋಲಿಯಲ್ಲಿ  ವಿವಿಧ ಬಗೆಯ ಚಿತ್ತಾರ, ಹೂಗಳಿಂದ ರಚಿಸಿದ ರಂಗೋಲಿ,​ ಹಣತೆಯ  ದೀಪದಿಂದ  ಓಂ, ಸ್ವಸ್ತಿಕ್, ಶಂಖ ಚಕ್ರ ಗಳನ್ನು ರಚಿಸಲಾಯತು. 

 
ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು,  ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಪಡೆದರು ಧನ್ಯರಾದರು                                                                                                                          ಧಾರ್ಮಿಕ ಪೂಜಾವಿಧಾನಗನ್ನು ಅರ್ಚಕ  ವಿನಾಯಕ ಭಟ್, ದಯಾಘನ್ ಭಟ್ ನೆರವೇರಿಸಿದರು​. ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ , ನರಸಿಂಹ ಕಿಣೆ, ಭಾಸ್ಕರ್ ಶೆಣೈ, ಪ್ರದೀಪ್ ರಾವ್, ದೀಪಕ್ ಭಟ್,   ಜಿ ಎಸ್ ಬಿ ಯುವಕ ಮಂಡಲದ ಅಧ್ಯಕ್ಷ ನಿತೇಶ್ ಶೆಣೈ, ವಿಶಾಲ್ ಶೆಣೈ,​ ಉಮೇಶ್ ಪೈ, ನರಹರಿ ಪೈ,  ಗಿರೀಶ ಭಟ್, ಸತೀಶ್ ಕಿಣಿ,  ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು​, ಹಾಗೂ ನೂರಾರು  ಸಮಾಜ​ ಭಾಂದವರು ಉಪಸ್ಥಿತರಿದ್ದರು 
 
 
 
 
 
 
 
 
 
 
 

Leave a Reply