ಅಂಬಾಗಿಲು : ಅಯೋಧ್ಯಾ ರಾಮಮಂದಿರ ರಚನೆ; ವಿಶ್ವ ರೂಪ ದರ್ಶನ

ಅಂಬಾಗಿಲು : ವೈಶವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಪಕ್ಷ್ಮೀ ಜಾಗರಣೆಯ ಪ್ರಯುಕ್ತ ಆದಿತ್ಯವಾರ ಮುಂಜಾನೆ 5 ಕ್ಕೆ ಸಾವಿರಾರು ಹಣತೆ ದೀಪಗಳಿಂದ ವಿಶ್ವ ರೂಪ ದರ್ಶನ ನಡೆಯಿತು. ಈ ಸಂದರ್ಭದಲ್ಲಿ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ಮಾದರಿಯ ರಂಗೋಲಿ ಬಿಡಿಸಿದ್ದು ಸೇರಿದ ಭಕ್ತಾಧಿಗಳ ಗಮನ ಸೆಳೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ , ದೀಪಾರಾಧನೆ , ಭಜನಾ ಕಾರ್ಯಕ್ರಮ ನೆಡೆಯಿತು.  ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನೆಡೆಯಿತು.  ವೈಶವಾಣಿ ಸಮಾಜದ ದೇವಳದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಯುವಕ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply