ಯುಪಿಎಂಸಿ- ಸದ್ಭಾವನಾ ದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್.ಎಸ್‌.ಎಸ್ ಘಟಕದ ವತಿಯಿಂದ ಆಗಸ್ಟ್ 18 ರಂದು ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಮಾತನಾಡುತ್ತಾ ರಾಜ್ಯದ ಎಲ್ಲಾ ಧರ್ಮ, ಭಾಷೆಗಳ ಜನರಲ್ಲಿ ರಾಷ್ಟ್ರೀಯ ಏಕೀಕರಣ ಮೂಡಿ, ಕೋಮು ಸೌಹಾರ್ದತೆಯನ್ನು ಸದಾ ಉತ್ತೇಜಿಸಬೇಕು ಎಲ್ಲರಲ್ಲೂ ಸದ್ಭಾವನೆ ಮೂಡಿ ಹಿಂಸಾತ್ಮಕ ಮನೋಭಾವದಿಂದ ಅಹಿಂಸೆಯ ಕಡೆಗೆ ಎಲ್ಲರ ಮನಸ್ಸು ತಿರುಗಬೇಕು ಎಂದು ತಿಳಿಸಿದರು.
ಎನ್.ಎಸ್‌.ಎಸ್ ಸಹ ಯೋಜನಾಧಿಕಾರಿ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸದ್ಭಾವನಾ ದಿನಾಚರಣೆ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿರು. ಈ ಸಂದರ್ಭದಲ್ಲಿ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ, ಉಪನ್ಯಾಸಕಿ ಶ್ರೀಮತಿ ಸಿಬಿ ಪೌಲ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply