ಪೇಜಾವರ ಶ್ರೀ ಗುರುವಂದನೆ : ಉಮೇಶ್ ರಾವ್ ಮತ್ತು ತಂಡದವರಿಂದ ವಿಶಿಷ್ಟ ಗೋಸೇವೆ

ಶನಿವಾರ ಉಡುಪಿಯಲ್ಲಿ ಅತ್ಯಂತ ವೈಭವದಿಂದ ಪೇಜಾವರ ಶ್ರೀಗಳ ಷಷ್ಟ್ಯಬ್ದ ಅಭಿವಂದನ ಸಮಾರಂಭ ನೆರವೇರಿತು. ಇದರ ಅಂಗವಾಗಿ ಒಂದಷ್ಟು ಸಮಾಜಮುಖಿ ಸೇವಾ ಕಾರ್ಯಗಳನ್ನೂ ಸಮಿತಿ ಹಾಗೂ ಕೆಲವು ಭಕ್ತರ ಸಹಕಾರದಿಂದ ನಡೆಸಲಾಗಿದೆ.
ಉಮೇಶ್ ರಾವ್  ಬಡಾನಿಡಿಯೂರು ಮತ್ತು ಅವರ ತಂಡದವರು ಶ್ರೀಕೃಷ್ಣ ಮಠದ ಗೋಶಾಲೆ, ಅಷ್ಟಮಠಗಳು, ರಾಘವೇಂದ್ರ ಮಠ ಉತ್ತರಾದಿ ಮಠ, ನೀಲಾವರ ಕೊಡವೂರು ಹೆಬ್ರಿ ಗೋಶಾಲೆಗೆ 250ಕ್ವಿಂಟಾಲ್ ಗೋಗ್ರಾಸ ಹಿಂಡಿಯನ್ನು ಅರ್ಪಿಸಿರುವುದು ಮಾತ್ರವಲ್ಲದೇ ನೀಲಾವರ ಗೋಶಾಲೆಗೆ ಸವತ್ಸ ಧೇನು (ಹಸು ಮತ್ತು ಕರು) ವನ್ನು ದಾನ ಮಾಡಿ ವಿಶೇಷ ಗೋಸೇವೆಗೈದಿದ್ದಾರೆ .
 ಈ ತಂಡದಿಂದ ಈ ತನಕ ಉಡುಪಿಯ ಆಸುಪಾಸಿನ‌ ಗೋಶಾಲೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 15 ಟನ್ ಗೋಗ್ರಾಸ ಹಿಂಡಿ ಸಮರ್ಪಿಸಿ ವಿಶೇಷ ಗೋಸೇವೆ ಮಾಡಿರುವುದನ್ನು ಪೇಜಾವರ ಶ್ರೀಗಳು ಅತ್ಯಂತ ಹೃತ್ಪೂರ್ವಕವಾಗಿ ಪ್ರಶಂಶಿಸಿದ್ದಾರೆ.
 
 
 
 
 
 
 
 
 
 
 

Leave a Reply